ಮೇ.4 : ಬೊಮ್ಮಾರಿನಲ್ಲಿ ಹೊನಲು‌ ಬೆಳಕಿನ ಕ್ರಿಕೆಟ್ ಪಂದ್ಯಾಟ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ಶ್ರೀ ಗಜಾನನ ಮಿತ್ರ ಮಂಡಳಿ ಇವರಿಂದ 30 ಗಜಗಳ ಹೊನಲು ಬೆಳಕಿನ 7 ಜನರ ಮುಕ್ತ ಅಂಡರ್ ಆಮ್೯ ಕ್ರಿಕೆಟ್ ಪಂದ್ಯಾಟ ಮೇ.4ರಂದು ಬೊಮ್ಮಾರಿನ ಶ್ರೀ ಮೂವರ್ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನವಾಗಿ 10,000 ಮತ್ತು ಗಜಾನನ ಟ್ರೋಫಿ,, ದ್ವಿತೀಯ ಬಹುಮಾನ ನಗದು 7000 ಮತ್ತು ಗಜಾನನ ಟ್ರೋಫಿ ಹಾಗೂ ತೃತೀಯ ಮತ್ತು ಚತುರ್ಥ ಗಜಾನನ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳಾದ ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ, ಸರಣಿ ಶ್ರೇಷ್ಠ, ಫೈನಲ್‌ ಪಂದ್ಯಾಟದ ಪಂದ್ಯ ಶ್ರೇಷ್ಠ ಬಹುಮಾನಗಳಿವೆ.