ಕಲ್ಲುಗುಂಡಿ: ಹೋಟೆಲ್ ಸಮುದ್ರ ಶುಭಾರಂಭ

0

ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿ ರಾಜ್ಯ ಹೆದ್ದಾರಿಯ ಮೀನು ಮಾರುಕಟ್ಟೆ ಹತ್ತಿರ ದುರ್ಗಾಪ್ರಸಾದ್ ದೇವರಗುಂಡ ಮತ್ತು ಗುರುಪ್ರಸಾದ್ ದೇವರ ಗುಂಡ ಮಾಲಕತ್ವದ ಹೋಟೆಲ್ ಸಮುದ್ರ ಮೇ.5 ರಂದು ಶುಭಾರಂಭಗೊಂಡಿತು.

ನರಸಿಂಹ ಭಟ್ ಗಣಪತಿ ಹವನ ನೆರವೇರಿಸಿದರು. ಹೋಟೆಲ್ ಉದ್ಘಾಟನೆಯನ್ನು ಕಲ್ಲುಗುಂಡಿ ನವಮಿ ಸ್ಟೋರ್ ಮಾಲೀಕ ಯು. ಬಿ. ಚಕ್ರಪಾಣಿ ನೆರವೇರಿಸಿದರು.ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.ನೂತನವಾಗಿ ಶುಭಾರಂಭವಾಗಿರುವ ಹೋಟೆಲ್ ನಲ್ಲಿಮಾಂಸಹಾರಿ ಮತ್ತು ಸಸ್ಯಹಾರಿ ಊಟ ಉಪಹಾರದ ವ್ಯವಸ್ಥೆ ಇದೆ. ಮುಖ್ಯವಾಗಿ ಸ್ಪೆಶಲ್ ಬಾಳೆ ಎಲೆಯಲ್ಲಿ ಮೀನು ಊಟ ಲಭ್ಯವಿದೆ. ಅಲ್ಲದೆ ನೀರ್ ದೋಸೆ, ಇಡ್ಲಿ, ಪುಟ್ಟು , ಸಾದಾದೋಸೆ, ಪುಂಡಿ, ರೊಟ್ಟಿ, ಚಪಾತಿ , ಸೇಮಿಗೆ ,ಕಲ್ತಪ್ಪ, ಮುಂತಾದ ಗ್ರಾಮೀಣ ಭಾಗದ ಮತ್ತು ಕೇರಳ ಶೈಲಿಯ ಆಹಾರ ಪದಾರ್ಥಗಳು ದೊರೆಯುತ್ತದೆ ಎಂದು ಮಾಲಿಕರು ತಿಳಿಸಿದರು.