ಕೊಲ್ಲಮೊಗ್ರು ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಸಹಾಯಧನ ಹಸ್ತಾಂತರ

0

ಕೊಲ್ಲಮೊಗ್ರು ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಮೇ.5 ರಂದು ಸಹಾಯಧನ ಹಸ್ತಾಂತರ ಮಾಡಿದರು.

ಮರದ ಕೊಂಬೆ ಬಿದ್ದು ಗಾಯ ಗೊಂಡಿದ್ದ ಕಲ್ಮಕಾರು ಅಂಗನವಾಡಿ ಕಾರ್ಯಕರ್ತೆ ಶ್ರೀ ಮತಿ ನೇತ್ರಾವತಿ ಅವರ ಚಿಕಿತ್ಸೆ ಗೆ ಸಮಿತಿ ವತಿಯಿಂದ ₹ 10,000/- ವನ್ನು ಅವರ ಪತಿ ಶ್ರೀ ರಂಗನಾಥ್ ಗಡಿಕಲ್ಲು ರವರಿಗೆ ಹಸ್ತಾಂತರಿಸಲಾಯಿತು.

ಇದೇ ಸಂದರ್ಭದಲ್ಲಿ ಬಡ ಕುಟುಂಬದವರಾಗಿರುವ ಶ್ರೀಮತಿ ಜಾನಕಿ ರಾಮಣ್ಣ ಗೌಡ ಮಿತ್ತಡ್ಕರವರಿಗೆ ಊರವರ ಸಹಕಾರ ದಿಂದ ನೂತನ ಮನೆ ನಿರ್ಮಾಣ ಗೊಳ್ಳುತಿದ್ದು ಅವರಿಗೂ ₹3000/-ವನ್ನು ಧನ ಸಹಾಯ ನೀಡಲಾಯಿತು. ಈ ಸಂದರ್ಭ ದಲ್ಲಿ ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷರಾದ ಶೇಖರ ಅಂಬೆ ಕಲ್ಲು, ಕೊಲ್ಲಮೊಗ್ರು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಮಣಿಕಂಠ ಕೊಳಗೆ, ಕಾರ್ಯದರ್ಶಿ ದಿನೇಶ್ ಕುಮಾರ್ ಮಡ್ತಿಲ, ಹಿರಿಯರಾದ ಚಿನ್ನಪ್ಪ ಗೌಡ ನಿಡುಬೆ, ಪುರುಷೋತ್ತಮ ಪೊನ್ನ ಚಂದ್ರಮನೆ, ಸುಬ್ರಮಣ್ಯ ಬೊಳಿಯಾನ ಮನೆ, ಚೆನ್ನಕೇಶವ ಕೋನಡ್ಕ, ಶೇಖರಪ್ಪ ತಳವಾರ ಬೆಂಡೋಡಿ , ವಾಸುದೇವ ಗೌಡ ಸಂಕೇಶ , ಐತ ಗಡಿಕಲ್ಲು ಮೊದಲಾದ ಕಾಂಗ್ರೆಸ್ ಕಾರ್ಯ ಕರ್ತರು ಉಪಸ್ಥಿತರಿದ್ದರು.