ಹರೀಶ್ ಕಾಂಚೋಡು ನಿಧನ

0

ಬಾಳಿಲ ಗ್ರಾಮದ ಕಾಂಚೋಡು ದಿ. ಕೃಷ್ಣ ನಾಯ್ಕರ ಪುತ್ರ ಹರೀಶ್ ಅಸೌಖ್ಯದಿಂದ ಮೇ. 5ರಂದು ನಿಧನರಾದರು. ಇವರಿಗೆ 38 ವರ್ಷ ವಯಸ್ಸಾಗಿತ್ತು.
ಇವರಿಗೆ ಕೆಲವು ತಿಂಗಳ ಹಿಂದೆ ಜ್ವಾಂಡಿಸ್ ಖಾಯಿಲೆ ಆವರಿಸಿದ ಬಳಿಕ ಲಿವರಿಗೆ ಹರಡಿತ್ತೆನ್ನಲಾಗಿದೆ. ಕಳೆದ ಎರಡು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಹಳ್ಳಿ ಮದ್ದಿನ ಮೊರೆ ಹೋಗಿದ್ದರೆನ್ನಲಾಗಿದೆ. ಔಷಧ ಫಲಿಸದೆ ಮೇ. 5ರಂದು ಕೊನೆಯುಸಿರೆಳೆದರು. ಮೃತರು ತಾಯಿ ಶ್ರೀಮತಿ ಯಮುನ, ಪತ್ನಿ ಶ್ರೀಮತಿ ನಯನ, ಪುತ್ರ ಹನ್ವಿತ್, ಪುತ್ರಿ ಹನಿಕ್ಷಾ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.