ಸುಳ್ಯದಲ್ಲಿ ಮಂದಾರ ಕಿಡ್ಸ್ ಪ್ರಿ ಸ್ಕೂಲ್ ಹಾಗೂ ಶ್ರೀ ಜ್ಞಾನ ಮಂದಾರ ಶಿಕ್ಷಕಿಯರ ತರಬೇತಿ ಕೇಂದ್ರ ಶುಭಾರಂಭ

0

ಶ್ರೀ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರ ರಿ. ಮುಡಿಪು ಇವರ ಆಶ್ರಯದಲ್ಲಿ ಮಂದಾರ ಕಿಡ್ಸ್ ಪ್ರಿ ಸ್ಕೂಲ್, ಶ್ರೀ ಜ್ಞಾನ ಮಂದಾರ ಶಿಕ್ಷಕಿಯರ ತರಬೇತಿ ಕೇಂದ್ರ, ಮಂದಾರ ಭರತನಾಟ್ಯ, ಸಂಗೀತ ಶಾಲೆ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರವು ಸುಳ್ಯದ ಕೆ ಎಸ್ ಆರ್ ಟಿ ಸಿ ಡಿಪೋ ಹತ್ತಿರದ ಬೃಂದಾವನದಲ್ಲಿ ಮೇ. 8 ರಂದು ಉದ್ಘಾಟನೆಗೊಂಡಿತು.

ಸೈಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮ ಗುರುಗಳಾದ ರೇ.ಫಾ. ವಿಕ್ಟರ್ ಡಿಸೋಜ ಅವರು ಪ್ರಾರ್ಥನಾ ವಿಧಿ ನೆರವೇರಿಸಿ ಶುಭಾಶಿರ್ವಚನಗೈದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಶ್ರೀ ಜ್ಞಾನ ಮಂದಾರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸೋಮಶೇಖರ್, ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಉಪಾಧ್ಯಕ್ಷ ಹಾಗೂ ಬೆಂಗಳೂರು ಶ್ರೀ ಜ್ಞಾನ ಮಂದಾರ ಶಿಕ್ಷಣ ಸಂಸ್ಥೆಯ ನಿರ್ದೇಶಕ ನವೀನ್ ಮಚಾದೊ, ಬೃಂದಾವನ ಮಾಲಕ ನಾಗೇಶ್, ಸೌಮ್ಯ, ಕೃತಿ, ಪುಟಾಣಿಗಳು ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.