ನಾಳೆ ಕನಕಮಜಲು ಗ್ರಾಮಸ್ಥರ ವತಿಯಿಂದ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ಹಿರಿಯ ಬಿಜೆಪಿ ಮುಖಂಡ ಹಾಗೂ ಹಿರಿಯ ಉದ್ಯಮಿ ಜಾಲ್ಸೂರು ಗ್ರಾಮದ ವಿನೋಬನಗರ ಶ್ರೀ ಅನಂತ ಸುಬ್ರಾಯ ಕಾಮತ್ & ಸನ್ಸ್ ಗೇರುಬೀಜ ಕಾರ್ಖಾನೆಯ ಸ್ಥಾಪಕರಾದ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಕನಕಮಜಲು ಗ್ರಾಮಸ್ಥರ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕನಕಸೌಧ ಸಭಾಂಗಣದಲ್ಲಿ ಮೇ.10ರಂದು ನಾಳೆ ಸಂಜೆ ಜರುಗಲಿದೆ.

ಕನಕಮಜಲು ಗ್ರಾ.ಪಂ. ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಾಮದ ವಿವಿಧ ಸಂಘ – ಸಂಸ್ಥೆಗಳ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನಡೆಯಲಿದೆ.