ಸುಳ್ಯ: ನಿಲ್ಲಿಸಿದ್ದ ಬೈಕ್ ಕಳವು

0

ನಿಲ್ಲಿಸಿದ್ದ ಬೈಕ್ ಕಳವಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಧಾರವಾಡದ ಬಸವರಾಜ ಚನ್ನಬಸಪ್ಪ ಮುದ್ದೆನಕೊಪ್ಪ ಅವರು ಸುಳ್ಯದಲ್ಲಿ ಜಲಜೀವನ್ ಮಿಷನ್ ಯೋಜನೆ ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿದ್ದು, ಅವರು ತನ್ನ ಬೈಕ್ ಅನ್ನು ಲಾಡ್ಜ್ ಒಂದರ ಎದುರು ನಿಲ್ಲಿಸಿ ಊರಿಗೆ ತೆರಳಿದ್ದರು. ಮೇ 20ರಂದು ಬೆಳಗ್ಗೆ ನೋಡಿದಾಗ ಬೈಕ್ ಕಾಣಿಸದೇ ಇದ್ದು ಅಲ್ಲಿನವರಲ್ಲಿ ವಿಚಾರಿಸಿ, ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.