![](https://sullia.suddinews.com/wp-content/uploads/2024/05/image-236-768x1024.png)
ದ.ಕ. ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ಕಾಲಾವಧಿ ನೇಮೋತ್ಸವ, ಹರಕೆಯು ಮೇ.24 ಮತ್ತು 25ರಂದು ಜರುಗಿತು.
ಮೇ 24 ರಂದು ಸ್ಥಳ ಶುದ್ಧೀಕರಣ ಹಾಗೂ ಕುಯಿಂತೋಡು ಮನೆಯಿಂದ ದೈವದ ಭಂಡಾರ ತರಲಾಯಿತು.
ಮೇ 25 ರಂದು ಬೆಳಿಗ್ಗೆ ಬಿರ್ಮೆರ್ , ಮದಿಮಲ್, ಬಚ್ಚ ನಾಯ್ಕ , ಮೂವೆ, ಕರಿಯ ನಾಯಕ, ಗಿಳಿ ರಾಮ ಸೇರಿದಂತೆ ಆರು ಉಪದೈವಗಳ ನಡಾವಳಿ ನಡೆಯಿತು.
ಬಳಿಕ ಶಿರಾಡಿ ಶ್ರೀ ರಾಜನ್ ದೈವ, ಪುರುಷ ದೈವಗಳು , ಪೊಟ್ಟನ್ ದೈವದ ನಡಾವಳಿ , ಮಾರಿಕಳ, ಹರಕೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಶಿರಾಡಿ ದೈವಸ್ಥಾನದ ಮೊಕ್ತೇಸರರಾದ ನಾರಾಯಣ ಕೆ. ಸಿ, ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕೆ. , ಕೋಶಾಧಿಕಾರಿ ಕೆ. ಪಿ. ಪ್ರಕಾಶ್ , ಕಾರ್ಯದರ್ಶಿ ಜಯರಾಮ ಅಬೀರಾ , ಕುಳವಾರು ಕುಟುಂಬಗಳು, ಪದಾಧಿಕಾರಿಗಳು, ಸರ್ವಸದಸ್ಯರು , ದೈವದ ಪೂಜಾರಿಗಳು , ಊರ- ಪರವೂರಿನವರು ಹೆಚ್ಚಿನ ಸಂಖೆಯಲ್ಲಿ ಉಪಸ್ಥಿತರಿದ್ದರು.