ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿರವರು ಹಾಗೂ ಅವರ ಪತ್ನಿಯೊಂದಿಗೆ ಜೂ.3 ರ ಬೆಳಗ್ಗೆ ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾ ಶಾಲಾ ಹೈಸ್ಕೂಲ್ ವಿಭಾಗದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ನೈರುತ್ಯ ಪದವೀಧರ ಮತ್ತು ಶಿಕ್ಚಕರ ಕ್ಷೇತ್ರಕ್ಕೆ ಇಂದಿನಿಂದ ಮತದಾನ ಆರಂಭವಾಗಿದೆ. ನೋಂದಣಿಗೊಂಡ ಪದವೀಧರರು ಮತ್ತು ಶಿಕ್ಷಕರು ಮತದಾನ ನಡೆಯುತ್ತಿದೆ.
![](https://sullia.suddinews.com/wp-content/uploads/2024/06/image-26-1024x576.png)
ಶಿವಮೊಗ್ಗ, ಚನ್ನಗಿರಿ, ಹೊನ್ನಾಳಿ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು ಜಿಲ್ಲೆಯಲ್ಲಿ ಇದರ ಮತದಾನ ಆರಂಭವಾಗಿದೆ. ಇಂದಿನಿಂದ 9 ಗಂಟೆಯಿಂದ ಸಂಜೆ 4 ಯವರೆಗೆ ನಡೆಯಲಿದೆ.
ಪದವೀಧರ ಕ್ಷೇತ್ರದಲ್ಲಿ 84 ಸಾವಿರ ಮತಾರರು ಮತಚಲಾಯಿಸಿದರೆ ಶಿಕ್ಷಕರ ಕ್ಷೇತ್ರದಲ್ಲಿ 25 ಸಾವಿರ ಮತಗಳು ಚಲಾವಣೆಗೊಳ್ಳಲಿದೆ. ಜಿಲ್ಲೆಯಲ್ಲಿ 70 ಪದವೀಧರ ಮತ್ತು ಶಿಕ್ಷಕರ ಮತಗಟ್ಟೆಗಳಿವೆ.