ಬಳ್ಪ: ವೀಲ್ ಚಯರ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಪಂಜ ವಲಯದ ಬಳ್ಪ ಕಾರ್ಯಕ್ಷೇತ್ರದಲ್ಲಿ ಮದುಮೇಹ ಹೆಚ್ಚಾಗಿ ಒಂದು ಕಾಲು ಕಳೆದುಕೊಂಡ ರಾಧಾಕೃಷ್ಣ ರೈಯವರಿಗೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವೀಲ್ ಚಯರ್ ನ್ನು ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿ ಶ್ರೀಮತಿ ಕಲಾವತಿ, ಬಳ್ಪ ಒಕ್ಕೂಟದ ಕಾರ್ಯದರ್ಶಿ ನೇತ್ರವತಿ ಹೊಪ್ಪಾಳೆ, ಒಕ್ಕೂಟದ ಉಪಾಧ್ಯಕ್ಷ ಅಚ್ಚುತ ಗೌಡ ಆಲ್ಕಬೆ ,ಸೇವಾಪ್ರತಿನಿಧಿ ಶ್ರೀಮತಿ ಭವ್ಯ ಉಪಸ್ಥಿತರಿದ್ದರು.