![](https://sullia.suddinews.com/wp-content/uploads/2024/06/image-150-492x1024.png)
ಪಂಜದ ಕೃಷ್ಣನಗರ ಪುತ್ಯಕಟ್ಟೆ ಎಂಬಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಇಟ್ಟಂತಹ ತಾಂಬೂಲ ಪ್ರಶ್ನೆಯ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಸ್ಥಳದ ದೋಷ ನಿವಾರಣೆಗಾಗಿ ಕ್ಷೇತ್ರದಲ್ಲಿ ಸ್ಥಳ ಶುದ್ದಿ, ಅಘೋರ ಹೋಮ, ಪ್ರೇತೊಚ್ಚಟನೆ, ಸ್ಥಳ ರಕ್ಷೆ, ನವಗ್ರಹ ಹೋಮ, ಅಥರ್ವಶೀರ್ಷ, ಮಹಾಗಣಪತಿ ಹೋಮ ಮಾಡುವ ಮುಖಾಂತರ ಕ್ಷೇತ್ರದ ಅಭಿವೃದ್ಧಿಗಾಗಿ ಕೆ.ಹರೀಶ್ ನಾಯಕ್ ಮನೆಯವರು ಶ್ರೀ ದೇವರಿಗೆ ವಿಶೇಷ ಸೇವೆ ನೀಡಿದ್ದಾರೆ.