ಕಲ್ಲಪಳ್ಳಿ ಪೆರುಮುಂಡ ಶ್ರೀಮತಿ ದೇವಮ್ಮ ಪಿ.ಕೆ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ- ನುಡಿನಮನ

0

ಕಲ್ಲಪಳ್ಳಿಯ ಪ್ರತಿಷ್ಠಿತ ಪೆರುಮುಂಡ ಮನೆತನದ ದಿ.ಪಿ.ಎಂ.ಕೃಷ್ಣಪ್ಪ ಗೌಡ ರವರ ಧರ್ಮಪತ್ನಿ ಶ್ರೀಮತಿ ದೇವಮ್ಮ ಪಿ.ಕೆ ರವರು ಮೇ.30 ರಂದು ನಿಧನರಾಗಿದ್ದು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ನುಡಿನಮನಕಾರ್ಯಕ್ರಮವು ಜೂ.15 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.

ಶಿಕ್ಷಕ ಮೋಹನ್ ಪೆರಾಜೆ ಮತ್ತು ಕುಟುಂಬಸ್ಥರ ಪರವಾಗಿ ಬೆಂಗಳೂರಿನ ಹೈಕೋರ್ಟ್ ನ್ಯಾಯವಾದಿ ಧರ್ಮಪಾಲ ಎಣ್ಣೆಮಜಲು ರವರು ಮೃತರ ಜೀವನಗಾಥೆಯ ಕುರಿತು ಮಾತನಾಡಿ ನುಡಿನಮನ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮೃತರ ಪುತ್ರರಾದ ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದ ಜೀ.ಸ.ಅಧ್ಯಕ್ಷ ಬಾಲಚಂದ್ರ ಪಿ.ಕೆ, ಸುಳ್ಯದಲ್ಲಿ ವೈದ್ಯರಾಗಿರುವ
ರೊ. ಡಾ. ಕೇಶವ ಪಿ.ಕೆ, ಪುತ್ರಿಯರಾದ ಶ್ರೀಮತಿ ಗಿರಿಜಮ್ಮ ಪಿ.ಕೆ, ಶ್ರೀಮತಿ ಕುಸುಮಾವತಿ ಪಿ.ಕೆ, ಶ್ರೀಮತಿ ದಯಾಮಣಿ ಪಿ.ಕೆ, ಶ್ರೀಮತಿ ಉಷಾಕುಮಾರಿ ಪಿ.ಕೆ ಹಾಗೂ ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳು,ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.

ಆಗಮಿಸಿದ ಸಾರ್ವಜನಿಕ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ
ಸಮರ್ಪಿಸಿದರು.