ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಮಹಾಸಭೆ

0

ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಪನ್ನೆ ಆಯ್ಕೆ

ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಆರೋಗ್ಯ ನಿಧಿ ವಿತರಣೆ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಜೂ.೧೬ರಂದು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರ ದಲ್ಲಿ ನಡೆಯಿತು.


ಮಹಾಸಭೆಯಲ್ಲಿ ೨೦೨೪-೨೫ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು, ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಜಯನಗರ, ಕಾರ್ಯದರ್ಶಿಯಾಗಿ ಸಚಿತ್ ಕಲ್ಮಡ್ಕ, ಕೋಶಾಧಿಕಾರಿಯಾಗಿ ವಿಜಯ ಕುಮಾರ್ ಎರ್ಮೇಟ್ಟಿ ಆಯ್ಕೆಯಾದರು.


ಜೊತೆ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಬೇರ್ಪಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಸತ್ಯಾ ಯಂ. ಕೊಲ್ಲಮೊಗ್ರ ಸುಳ್ಯ, ಸಂಘದ ಕಾನೂನು ಸಲಹೆಗಾರರಾಗಿ ನಾರಾಯಣ ಕೆ. ನ್ಯಾಯವಾದಿಗಳು ಸುಳ್ಯ, ಗೌರವ ಸಲಹೆಗಾರರಾಗಿ ಶಂಕರ ಪಾಟಾಳಿ ಪರಿವಾರಕಾನ, ಚಂದ ಕುಡೆಕಲ್ಲು, ವೆಂಕಟ್ರಮಣ ಬೇರ್ಪಡ್ಕ, ಸಂಘದ ಆಂತರಿಕ ಲೆಕ್ಕಪರಿಶೋಧಕರಾಗಿ ನಿರ್ದೇಶಕರಾದ ಮಹಾಲಿಂಗನ್ ಬಾಜರ್ತೊಟ್ಟಿ ಹಾಗೂ ನಿರ್ದೇಶಕರುಗಳಾದ ಚಂದ್ರಶೇಖರ ಉದ್ದಂತಡ್ಕ, ಗೋಪಾಲ ಅಡ್ಕಾರುಬೈಲು, ಗೋಪಾಲಕೃಷ್ಣ ಮೊರಂಗಲ್ಲು, ಗೋಪಾಲಕೃಷ್ಣ ಕೊಲ್ಲಮೊಗ್ರ, ಪ್ರಶಾಂತ್ ಸೂಂತೋಡು, ಸೌಮ್ಯಾ ಇರಂತಮಜಲು, ನಾಗರಾಜ್ ಜಾಲ್ಸೂರು ಹಾಗೂ ಸುರೇಶ್ ಕರ್ಲಪ್ಪಾಡಿ ಆಯ್ಕೆಯಾದರು.


ಸಭೆಯ ಅಧ್ಯಕ್ಷತೆಯನ್ನು ಚಂದ್ರಶೇಖರ ಉದ್ದಂತಡ್ಕ ವಹಿಸಿದ್ದರು.
ಸಚಿತ್ ಕಲ್ಮಡ್ಕ ಹಾಗೂ ಪ್ರವೀಣ್ ಕುಮಾರ್ ಜಯನಗರ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯಾ ಇರಂತಮಜಲು ಸ್ವಾಗತಿಸಿ, ಉದಯರವಿ ಕಲ್ಚಾರು ವಂದಿಸಿದರು.