ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ. ಕೃ.ಪ. ಸ. ಸಂಘದ ನಗದು ಗುಮಾಸ್ತ ರವೀಂದ್ರ ಮುಚ್ಚಾರ ನಿವೃತ್ತಿ

0

ಹರಿಹರ ಪಲ್ಲತಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಗದು ಗುಮಾಸ್ತ ರವೀಂದ್ರ ಮುಚ್ಚಾರ ಜೂ.30 ರಂದು ಸೇವಾ ನಿವೃತ್ತಿ ಹೊಂದಿದರು.

ಕಳೆದ 31 ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಇವರು 1993ರಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಸೇವೆಗೆ ಸೇರಿದ ಇವರು 16 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಬಳಿಕ ಸಂಸ್ಥೆಯ ಕಾಯಂ ನೌಕರನಾಗಿ ನಿಯತ್ತಿಗೊಂಡ ಅವರು 15 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದರು.

ಸದ್ಯ ಕೊಲ್ಲಮೊಗ್ರು ಬ್ರಾಂಚಿನಲ್ಲಿ ನಗದು ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಅನಸೂಯ ಗೃಹಿಣಿ, ಮಗಳು ಶಕುಂತಲಾ ಎಂ.ಆರ್, ಎಂಎ ಪದವೀಧರೆ, ಮತ್ತೋರ್ವ ಪುತ್ರಿ ಶರ್ಮಿಳಾ ಎಂ.ಆರ್ ಉಜಿರೆಯಲ್ಲಿ ತೃತೀಯ ಬಿ..ಕಾಂ ನಲ್ಲಿ ವ್ಯಾಸಂಗ ಮಾಡುತಿದ್ದಾರೆ.