![](https://sullia.suddinews.com/wp-content/uploads/2024/07/a8605304-54a2-48b4-bd88-e83f6c2e4bc7-768x1024.jpg)
ದೇವರಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮವು ನಡೆಯಿತು. ಬೆಳ್ಳಾರೆಯ ಮೆಸ್ಕಾಂ ಅಧಿಕಾರಿ ಜೆ. ಇ ಪ್ರಸಾದ್ ಕತ್ಲಡ್ಕ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಿ, ಬರೆಯಲು ಪೆನ್ನನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ನವೀನ್ ಕುಮಾರ್ ಸಾರಕರೆ, ಪವರ್ ಮ್ಯಾನ್ ಮಹಂತೇಶ ಉಪಸ್ಥಿತರಿದ್ದರು.ಶಾಲಾ ಮುಖ್ಯ ಗುರುಗಳು ಪ್ರಮೀಳಾ ರವರು ಸ್ವಾಗತಿಸಿ, ಸಹ ಶಿಕ್ಷಕಿ ಸೌಮ್ಯ ಬಿ. ಕೆ ರವರು ವಂದಿಸಿದರು.