ಹಿರಿಯ ಪತ್ರಿಕಾ ವಿತರಕ ಚಂದ್ರಕಾಂತ್ ಪ್ರಭುಗಳಿಗೆ ಸುದ್ದಿಯ ಗೌರವ

0

ಸುಳ್ಯದ ಹಿರಿಯ ಪತ್ರಿಕಾ ವಿತರಕ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆಯ ಆರಂಭದಿಂದಲೂ ಪತ್ರಿಕೆಯ ಏಜೆಂಟ್ ಆಗಿರುವ ಚಂದ್ರಕಾಂತ್ ಪ್ರಭುಗಳನ್ನು ಜುಲೈ 1 ರಂದು ಪತ್ರಿಕಾ ದಿನಾಚರಣೆ ಪ್ರಯುಕ್ತ ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ವತಿಯಿಂದ ಅವರನ್ನು ಅವರ ಕಾಂತಮಂಗಲದ ಮನೆಯಲ್ಲಿ ಗೌರವಿಸಲಾಯಿತು.

ಸುದ್ದಿ‌ ಪತ್ರಿಕೆ ಸಂಪಾದಕರಾದ ಹರೀಶ್ ಬಂಟ್ವಾಳ್ ರವರು, ಶಾಲು, ಸ್ಮರಣಿಕೆ ಹಾರ ಫಲ ತಾಂಬೂಲ ನೀಡಿ ಚಂದ್ರಕಾಂತ ಪ್ರಭುಗಳನ್ನು ಗೌರವಿಸಿದರು.

ಸುದ್ದಿ ಮಾಹಿತಿ ವಿಭಾಗ ಮುಖ್ಯಸ್ಥ ಕೃಷ್ಣ ಬೆಟ್ಟ, ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಜಾಹೀರಾತು ವಿಭಾಗ ಮುಖ್ಯಸ್ಥ ರಮೇಶ್ ನೀರಬಿದ್ರೆ, ವರದಿಗಾರರಾದ ಶಿವಪ್ರಸಾದ್ ಆಲೆಟ್ಟಿ, ಶರೀಫ್ ಜಟ್ಟಿಪಳ್ಳ ಈ ಸಂದರ್ಭದಲ್ಲಿ ಇದ್ದರು.

ಚಂದ್ರಕಾಂತ್ ಪ್ರಭುಗಳ ಪುತ್ರರಾದ ನರೇಶ್ ಪ್ರಭು, ಡಾ.ನಿತೀನ್ ಪ್ರಭು, ಸೊಸೆಯಂದಿರು, ಮೊಮ್ಮಕ್ಕಳು ಈ ಜತೆಗಿದ್ದರು.