ಕೊಲ್ಲಮೊಗ್ರು ಗ್ರಾ.ಪಂ.ನಲ್ಲಿ ಗ್ರಾಮಸಭೆ

0

ಕೊಲ್ಲಮೊಗ್ರು ಬಸ್ ತಂಗುದಾಣ ಶಿಥಿಲ, ಮಿತ್ತೋಡಿ ಸೇತುವೆ, ಕಾಡು ಪ್ರಾಣಿ ಹಾವಳಿ ಬಗ್ಗೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮ, ಉದ್ಯೋಗ ಖಾತ್ರಿ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ

ಕೊಲ್ಲಮೊಗ್ರು ಗ್ರಾ.ಪಂ ನ ಗ್ರಾಮ ಸಭೆ ಜು.2 ರಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇದರಲ್ಲಿ ನಡೆಯಿತು.

ಕೊಲ್ಲಮೊಗ್ರು ಪೇಟೆಯ ಬಸ್ ತಂಗುದಾಣ ಶಿಥಿಲಗೊಂಡ ಬಗ್ಗೆ, ಮಿತ್ತೋಡಿಯಲ್ಲಿ ಸೇತುವೆ ನಿರ್ಮಾಣ, ಗ್ರಾಮಸ್ಥರಿಗೆ ಕಾಡು ಪ್ರಾಣಿ ಹಾವಳಿ ಬಗ್ಗೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಗ್ಗೆ, ಉದ್ಯೋಗ ಖಾತ್ರಿ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಚಾಂತಾಳ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಶ್ವಥ್ ಯಲದಾಳು, ಸದಸ್ಯರುಗಳಾದ ಮಾದವ ಚಾಂತಾಳ, ಮೋಹಿನಿ ಕಟ್ಟ, ಶಿವಮ್ಮ ವೇದಿಕೆಯಲ್ಲಿದ್ದರು. ನೊಡೇಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ ಇದ್ದರು. ಪಿ.ಡಿ.ಒ ಚೆನ್ನಪ್ಪ ನಾಯ್ಕ ಸ್ವಾಗತಿಸಿದರು. ಗ್ರಾ.ಪಂ ಸಿಬ್ಬಂದಿ ವಸಂತ ಅವರು ವರದಿವಾಚನ ಮಡಿದರು. ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ ವಂದಿಸಿದರು.