ಆಲೆಟ್ಟಿ: ಕಲ್ಲೆಂಬಿ ಬಳಿ ಬಸ್ ಮತ್ತು ಬೈಕಿನ ಮಧ್ಯೆ ಅಫಘಾತ-ಬೈಕ್ ಸವಾರನಿಗೆ ಗಾಯ-ಆಸ್ಪತ್ರೆಗೆ ದಾಖಲು

0

ಆಲೆಟ್ಟಿಯ ಕಲ್ಲೆಂಬಿ ಎಂಬಲ್ಲಿ ಬಂದಡ್ಕ ಕಡೆಯಿಂದ ಕೋಲ್ಚಾರು ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಗೂರೂಜಿ ಟ್ರಾವೆಲ್ಸ್ ರವರ ಬಸ್ಸಿಗೆ ಸುಳ್ಯದಿಂದ ಕೋಲ್ಚಾರು ಕಡೆಗೆ ಸಂಚರಿಸುತ್ತಿದ್ದ ಬೈಕೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ಸಂಭವಿಸಿದೆ.

ಗುರೂಜಿ ಬಸ್ಸು ಕೋಲ್ಚಾರಿನಿಂದ ಹೊರಟು ಕಲ್ಲೆಂಬಿ ಬಳಿ ತಲುಪುತ್ತಿದ್ದಂತೆ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ವೇಳೆಗೆ ಎದುರಿನಿಂದ ಬರುತ್ತಿದ್ದ
ಬೈಕ್ ಸವಾರ ಆಲೆಟ್ಟಿಯ ಕೂಟೇಲು ನಿವಾಸಿ ಗಿರೀಶ್ ಎಂಬವರು ತನ್ನ ಹೊಂಡಾ ಬೈಕಿನಲ್ಲಿ ಬಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಿರೀಶ್ ರವರ ತಲೆಯ ಭಾಗಕ್ಕೆ ಗಾಯವಾಗಿದೆ.


ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರನನ್ನು ತಕ್ಷಣ ಬಸ್ಸಿನ ಸಿಬ್ಬಂದಿಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಲಾಗಿದ್ದು
ಬೈಕ್ ಸವಾರ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಹಾಗೂ ಪ್ರಕರಣದ ಕುರಿತು ಸ್ಥಳಕ್ಕೆ ಆಗಮಿಸಿದ ಸುಳ್ಯ ಪೋಲಿಸರು ಕೇಸು ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.