ಆಲೆಟ್ಟಿಯ‌ ಬಡ್ಡಡ್ಕ ಶಾಲೆಯಲ್ಲಿ ವನಮಹೋತ್ಸವ

0

ಮಂಗಳೂರು ವಿಭಾಗ , ಸುಳ್ಯ ವಲಯದ ವ್ಯಾಪ್ತಿಯ ಆಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲಿನ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜು.4 ರಂದು ವನ‌ ಮಹೋತ್ಸವ ಕಾರ್ಯಕ್ರಮ‌ ಮಾಡಲಾಯಿತು.


ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಶ್ರೀಮತಿ ಪುಷ್ಪವತಿ ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ವಲಯ ಅರಣ್ಯಾಧಿಕಾರಿ ಮಂಜುನಾಥ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವನಮಹೋತ್ಸವ ದ ಬಗ್ಗೆ ಮಾಹಿತಿ ನೀಡಿದರು.


ಅತಿಥಿಗಳಾಗಿ
ಶಾಲಾ ಸಂಚಾಲಕರಾದ ಡಾ. ಜ್ಞಾನೇಶ್,
ಗ್ರಾಮ ಪಂಚಾಯತಿ ಸದಸ್ಯರಾದ ಸತ್ಯಕುಮಾರ್ ಅಡಿಂಜ,
ಪಿ. ಡಿ. ಒ. ಕೀರ್ತಿ ಪ್ರಸಾದ್,
ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ,
SDMC ಅದ್ಯಕ್ಷರು, ಮುಖ್ಯ ಗುರುಗಳು, ಶಿಕ್ಷಕರು, ಗ್ರಾಮಸ್ಥರು, ಇಲಾಖಾ ಸಿಬ್ಬಂದಿಗಳು ಹಾಜರಿದ್ದರು .
ಶಾಲಾ ಮಕ್ಕಳಿಗೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.