ಅಜ್ಜಾವರ : ಭಾರತ ಮಾತಾ ಪೂಜನಾ ಕಾರ್ಯಕ್ರಮ

0

ನಿವೇದಿತಾ ಸಂಚಾಲನ ಸಮಿತಿ ಅಜ್ಜಾವರ, ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ಅಶ್ರಯದಲ್ಲಿ ‘ಭಾರತ ಮಾತಾ ಪೂಜನಾ ಕಾರ್ಯಕ್ರಮ ಜು.10ರಂದು ಶ್ರೀ ಶಂಕರ ಭಾರತಿ ವೇದಪಾಠ ಶಾಲೆ ಬಯಂಬು ಅಜ್ಜಾವರ ಇಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ವಿಶಾಲ ಮತ್ತು ಸಂಸ್ಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಯಾದ ಕುಸುಮಾದರ ಇವರು ಭಾರತ ಮಾತಾ ವಿಶೇಷ ಬೌದ್ದಿಕ್ ಮಾಡಿದರು.

ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರೈ, ಕಾರ್ಯಕ್ರಮ ದಲ್ಲಿ ಗುಣವತಿ ಕೊಲ್ಲತಡ್ಕ, ಶಶಿಕಲಾ ದುಗಲಡ್ಕ, ಜಯಂತಿ ಜನಾರ್ದನ,ವಿಶ್ವ ಹಿಂದೂ ಪರಿಷತ್ ಅಜ್ಜಾವರ ಶಾಖೆ ಇದರ ಅಧ್ಯಕ್ಷರಾದ ನಾರಾಯಣ ಬಂಟ್ರಬೈಲು, ಅಜ್ಜಾವರ ನಿವೇದಿತಾ ಸಂಚಲನ ಸಂಚಾಲಕರಾದ ಕವಿತಾ ಪುರುಷೋತ್ತಮ, ಮತ್ತು ನಿವೇದಿತಾ ಸಂಚಾಲನದ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

ಸ್ವಾಗತವನ್ನು ಪುಷ್ಪ ರಾಜೇಶ್ ದೊಡ್ಡೇರಿ, ವೈಯಕ್ತಿಕ ಗೀತೆಯನ್ನು ವಿಶಾಲ ಸೀತಾರಾಮ ಕರ್ಲಪಾಡ್ಡಿ ಕಾರ್ಯಕ್ರಮವನ್ನು ಜಯಶ್ರೀ ನಾಗೇಶ್ ಬೇಲ್ಯ ನಿರೂಪಿಸಿದರು ಶಾಂತಿ ಮಂತ್ರ ಹೇಳಿ ಕಾರ್ಯಕ್ರಮ ವನ್ನು ಕೊನೆಗೊಳಿಸಲಾಯಿತು