ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಕ್ಯಾಂಪ್ ನಡೆಯಿತು.

ವಿಕಲಚೇತನ ಇಲಾಖೆ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಜಂಟಿಯಾಗಿ ಕ್ಯಾಂಪ್ ನಡೆಯಿತು.

ವಿಕಲಚೇತನರ ಇಲಾಖೆಯ ತಾಲೂಕು ಪಂಚಾಯತ್ ನ ಚಂದ್ರಶೇಖರ್, ನಗರ ಪಂಚಾಯತ್ ನ ಪ್ರವೀಣ್ ನಾಯಕ್, ಇತರ ಪಂಚಾಯತ್ ನ ವಿ. ಅರ್.ಡಬ್ಲ್ಯೂ ರವರಾದ ಪುಟ್ಟಣ್ಣ ವಿ., ಮೀನಾಕ್ಷಿ, ಕಾವೇರಿ, ದಿನೇಶ, ವೆಂಕಟ್ರಮಣ, ಉಮ್ಮರ್, ಸದಾನಂದ, ಕುಸುಮ, ವೈದ್ಯಾಧಿಕಾರಿ ಡಾ. ಕರುಣಾಕರ್ ನೇತ್ರತ್ವದಲ್ಲಿ ಎಲುಬು ತಜ್ಞ ಪದ್ಮನಾಭ,ದಾದಿ ನಯನ
ಮತ್ತಿತರ ಎಲ್ಲಾ ತಜ್ಞ ವೈದ್ಯರು ಸಹಕಾರ ನೀಡಿದರು.

ಹಲವಾರು ಜನ ವಿಕಲಚೇತನರು ಇದರ ಪ್ರಯೋಜನ ಪಡೆದರು.