ಸೌಜನ್ಯಾ ಕೊಲೆ ಪ್ರಕರಣ : ನ್ಯಾಯ ಕೇಳಿ ಉಬರಡ್ಕದಲ್ಲಿ ಬ್ಯಾನರ್ ಅಳವಡಿಕೆ

0

ಸೌಜನ್ಯಾ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿ ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಜಂಕ್ಷನ್‌ನಲ್ಲಿ ಬ್ಯಾನರ್ ಅಳವಡಿಸಲಾಗಿದೆ.

“ಇವಳು ಹೆಣ್ಣಲ್ಲವೇ ಹಾಗಾದರೆ 11 ವರ್ಷ ಕಳೆದರೂ ಈ ಬಡ ಹೆಣ್ಣಿನ ಅತ್ಯಾಚಾರ ಮಾಡಿದವರು ಯಾಕೆ ಪತ್ತೆಯಾಗಿಲ್ಲ? ಇವಳನ್ನು ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆ ಇಲ್ಲವೆ? ಸೌಜನ್ಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ? ಹಳ್ಳಿಗೊಂದು ನ್ಯಾಯ, ಡೆಲ್ಲಿಗೊಂದು ನ್ಯಾಯವೇ? ಪ್ರಜ್ಞಾವಂತ ನಾಗರೀಕರೇ ಎಚ್ಚೆತ್ತುಕೊಳ್ಳಿ ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಂದು ಮುಗಿಸಿದ ಪಾಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೂ ಹೋರಾಟ ಮುಂದುವರಿಯಲಿ ಎಂದು ಸೌಜನ್ಯಳ ಅಣ್ಣ ತಮ್ಮಂದಿರು ಉಬರಡ್ಕ ಮಿತ್ತೂರು” ಎಂದು ಬ್ಯಾನರ್ ಅಳವಡಿಸಲಾಗಿದೆ.