ಅರಂಬೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಪಂಚಾಯತ್ ಕಟ್ಟಡ-ದುರಸ್ತಿ ಪಡಿಸುವಂತೆ ಸ್ಥಳೀಯರ ಆಗ್ರಹ

0

ಆಲೆಟ್ಟಿ ಗ್ರಾಮ ಪಂಚಾಯತ್ ಗೆ ಸೇರಿದ ಕಟ್ಟಡವೊಂದು ಅರಂಬೂರಿನಲ್ಲಿದ್ದು ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ.
ಈ ಕಟ್ಟಡದ ಒಂದು ಬದಿಯಲ್ಲಿ ಅಂಚೆ ಕಚೇರಿಯು ಕಾರ್ಯ ನಿರ್ವಹಿಸುತ್ತಿದೆ.

ಕಟ್ಟಡದ ಪಕ್ಕದಲ್ಲಿ ಅಬ್ದುಲ್ ರಹಿಮಾನ್ ರವರ ಖಾಸಗಿ ಜಾಗದಲ್ಲಿರುವ ಮರದ ಕೊಂಬೆಗಳು ಗಾಳಿ ಮಳೆಗೆ ಮೇಲ್ಚಾವಣಿಯ ಮೇಲೆ ಬಿದ್ದು ಹಂಚುಗಳು ಒಡೆದು ಮಳೆಯ ನೀರು ಒಳಗೆ ಸೋರುತ್ತಿದೆ.

ಇದರಿಂದಾಗಿ ಈಗಾಗಲೇ ಕಟ್ಟಡದ ಬಹುತೇಕ ಭಾಗಗಳು ಹಾನಿಗೊಂಡಿದೆ. ಶೀಘ್ರವಾಗಿ
ಕಟ್ಟಡದ ದುರಸ್ತಿ ಕಾರ್ಯ ಮಾಡದಿದ್ದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ. ಪಂಚಾಯತ್ ನವರು ಮುತುವರ್ಜಿ ವಹಿಸಿ ಕಟ್ಟಡವನ್ನು ಸಮರ್ಪಕ ರೀತಿಯಲ್ಲಿ ದುರಸ್ತಿ ಪಡಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿರುತ್ತಾರೆ.