ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಪೂರ್ವಿ ಚೆಸ್ ನಲ್ಲಿ ರಾಜ್ಯ ಮಟ್ಟಕ್ಕೆ

0

ಪ್ರೌಢಶಾಲಾ ವಿಭಾಗದ ಇಲಾಖಾ ಮಟ್ಟದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕುಮಾರಸ್ವಾಮಿ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಆ.3 ರಂದು ಬೆಳ್ಳಾರೆಯ ಕೆ.ಪಿ.ಎಸ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 5 ನೇ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಇವರು ಐವತೊಕ್ಲು ಗ್ರಾಮದ ರಾಮಚಂದ್ರಗೌಡ ಬಿ ಬರೆಮೇಲು ಮನೆ ಮತ್ತು
ವಿದ್ಯಾಲತ ದಂಪತಿಗಳ ಪುತ್ರಿ.