ಆನಂದಿ ಎಸ್.ರೈ ಕಾವಿನಮೂಲೆಯವರ ಉತ್ತರಕ್ರಿಯೆ, ಶ್ರದ್ಧಾಂಜಲಿ

0

ಬೆಳ್ಳಾರೆ ಗ್ರಾಮದ ಕಾವಿನಮೂಲೆ ಆನಂದಿ ಎಸ್.ರೈಯವರು ಜು.27 ರಂದು ನಿಧನರಾಗಿದ್ದು ಅವರ ಉತ್ತರಕ್ರಿಯೆ ಉಪ್ಪಿನಂಗಡಿಯ ಸಜಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವು ಆ.09 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.


ಪ್ರದೀಪ್ ಕುಮಾರ್ ರೈ ಪನ್ನೆಯವರು ದಿ.ಆನಂದಿ ರೈಯವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ದಿ.ಆನಂದಿ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.


ಈ ಸಂದರ್ಭದಲ್ಲಿ ಪುತ್ರರಾದ ಗೋವರ್ಧನ ಎಸ್.ರೈ, ಚಂದ್ರಶೇಖರ ಎಸ್.ರೈ, ಸುಬ್ರಹ್ಮಣ್ಯ ಎಸ್.ರೈ, ಮಂಜುನಾಥ ಎಸ್.ರೈ, ಪುತ್ರಿ ಶ್ರೀಮತಿ ಮಂಜುಳಾ ಎಸ್.ಶೆಟ್ಟಿ, ಸೊಸೆಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.