ಸುಳ್ಯದಲ್ಲಿ ನಡೆಯಲಿರುವ 10 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಸೆ.16 ರಂದು ಸುಳ್ಯದಲ್ಲಿ ನಡೆಯಲಿರುವ 10 ನೇ ವರ್ಷದಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಲ್ಲಿ ನಡೆಯಿತು.

ಬೆಳಗ್ಗೆ ಶ್ರೀ ಚೆನ್ನಕೇಶವ ದೇವರಿಗೆ ಪೂಜೆಯನ್ನು ನೆರವೇರಿಸಿ ಪ್ರಾರ್ಥನೆಯನ್ನು ಸಲ್ಲಿಸಿ ಬಿಡುಗಡೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ಆಲೆಟ್ಟಿ ಸದಾಶಿವ ದೇವಸ್ಥಾನದ ಜೀ.ಸ.ಅಧ್ಯಕ್ಷ ಎನ್. ಎ ರಾಮಚಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯ ಜಗದೀಶ್ ಸರಳಿಕುಂಜ, ನ.ಪಂ.ಸದಸ್ಯ ವಿನಯ್ ಕುಮಾರ್ ಕಂದಡ್ಕ, ಸಮಿತಿಯ ಉಪಾಧ್ಯಕ್ಷರಾದ ರಜತ್ ಅಡ್ಕಾರ್, ಪ್ರಕಾಶ್ ಯಾದವ್ ಸುಳ್ಯ, ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ,ಸದಸ್ಯರಾದ ಹರಿಪ್ರಸಾದ್ ಎಲಿಮಲೆ, ಭಾನುಪ್ರಕಾಶ್ ಪೆಲತಡ್ಕ, ಶಿವಪ್ರಸಾದ್ ಉಗ್ರಾಣಿ ಮನೆ, ಗಿರೀಶ್ ಕುಂಟಿನಿ, ಪ್ರಸಾದ್ ಕೆ ಎಚ್, ಚಂದ್ರಶೇಖರ ಸೆಂಚುರಿ ಸುಳ್ಯ, ಪ್ರಶಾಂತ್ ಅಂಬೆಕಲ್ಲು, ಅರವಿಂದ್, ಜ್ಞಾನಾನಂದ ಚಿಂಟಿಕಲ್ಲು, ಶ್ರೀದೇವಿ ಸ್ಟುಡಿಯೋ ಮಾಲಕ ಸತೀಶ್ ಸುಳ್ಯ, ಪ್ರಶಾಂತ್ ಕಾಯರ್ತೋಡಿ,
ರಾಜೇಶ್ ಕಲ್ಲುಮುಟ್ಲು, ಭಾನುಪ್ರಕಾಶ್ ದೊಡ್ಡ ತೋಟ, ಅಭಿಜಿತ್ ಸುಳ್ಯ, ಗಿರಿಧರ ನಾರಾಲು, ಪ್ರಮೋದ್ ಮಜಿಕೊಡಿ, ರಿಷಿಕೇಶ ಮಡಪ್ಪಾಡಿ, ಹರೀಶ್ ಜಟ್ಟಿಪಳ್ಳ, ಪ್ರಶಾಂತ್ ಅರಂಬೂರು, ಗಗನ್ ಬೈಪಾಡಿತಾಯ‌ ಆಲೆಟ್ಟಿ, ಜಯಂತ್ ರೈ, ಉಪೇಂದ್ರ ನಾಯಕ್, ಬಾಲಚಂದ್ರ ಉಬರಡ್ಕ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸೋಮಶೇಖರ ಪೈಕ ಸ್ವಾಗತಿಸಿ, ವಂದಿಸಿದರು.