ಉದಯಗಿರಿ, ಮಾವಿನಕಟ್ಟೆ ಶ್ರೀ ವಿಷ್ಣು ಸೇವಾ ಸಮಿತಿ ಇದರ ಆಶ್ರಯದಲ್ಲಿ ಓಣಂ ಆಚರಣೆಯ ಉದ್ಘಾಟನೆ

0

ಉದಯಗಿರಿ, ಮಾವಿನಕಟ್ಟೆ ಶ್ರೀ ವಿಷ್ಣು ಸೇವಾ ಸಮಿತಿ ಇದರ ಆಶ್ರಯದಲ್ಲಿ ಓಣಂ ಆಚರಣೆಯು ಇಂದು ಶ್ರೀ ವಿಷ್ಣು ಸಭಾಭವನ, ಉದಯಗಿರಿ- ಮಾವಿನಕಟ್ಟೆ ಇಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ‌ ವಿಷ್ಣುಮೂರ್ತಿ ದೈವದ ಪರಿಚಾರಕರಾದ ಭಾಸ್ಕರ ಬೆಳ್ಚಪ್ಪಾಡ ತಳೂರು ಇವರು ನೆರವೇರಿಸಿದರು. ಬಳಿಕ ವಿವಿಧ ಸ್ಪರ್ಧೆಗಳು ಆರಂಭಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನಕಟ್ಟೆ, , ಆಡಳಿತ ಸಮಿತಿ‌ ಸದಸ್ಯರಾದ ಗೋಪಿನಾಥ ಮೆತ್ತಡ್ಕ, ಶ್ರೀ ವಿಷ್ಣು ಸೇವಾ ಸಮಿತಿಯ ಅಧ್ಯಕ್ಷರಾದ ಹರೀಶ್ಚಂದ್ರ ಕೇಪಳಕಜೆ, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ನಾರ್ಣಕಜೆ, ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಭಾನುಪ್ರಕಾಶ್ ಹಾಗೂ ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು. ವಿಜಯ ಚಾರ್ಮತ ಕಾರ್ಯಕ್ರಮ ನಿರೂಪಿಸಿದರು. ಸಂಜೆ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ.