ಮುಳಿಯ ಗಾನರಥ ಸೀಸನ್ -1ಗ್ರ್ಯಾಂಡ್ ಫಿನಾಲೆ

0

ಜೂನಿಯರ್ ವಿಭಾಗದಲ್ಲಿ ಪಲ್ಲವಿ .ಆರ್.ಕೆ .ಪ್ರಥಮ ಪ್ರಶಸ್ತಿ

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಪುತ್ತೂರಿನ ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ನಡೆಸಲಾದ ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಗ್ಯಾಂಡ್ ಫಿನಾಲೆಯಲ್ಲಿ ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್. ಕೆ.ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಈ ಕಾರ್ಯಕ್ರಮ ಆ.26ರಂದು ಪುತ್ತೂರಿನ ಜೈನ ಭವನದಲ್ಲಿ ನಡೆಯಿತು. ಪ್ರಥಮ ಪ್ರಶಸ್ತಿ ವಿಜೇತರಿಗೆ ಚಿನ್ನದ ನಾಣ್ಯ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಪಲ್ಲವಿಯವರು ಮಂಗಳೂರಿನಲ್ಲಿ ವಾಸ್ತವ್ಯ ವಿರುವ ಅಮರಮೂಡ್ನೂರು ಗ್ರಾಮದ ಕೊಂಡೆಬಾಯಿ ರಾಮಣ್ಣ ಗೌಡ- ಅನಿತಾ ದಂಪತಿಯ ಪುತ್ರಿ.ಪ್ರಸ್ತುತ ಮಂಗಳೂರಿನ ತ್ರಿಶಾ ಕಾಲೇಜಿನ ವಿದ್ಯಾರ್ಥಿನಿ.