ಜಾಲ್ಸೂರು: ನಡುವಡ್ಕ ಬಳಿ ಮುರಿದು ಬಿದ್ದಿರುವ ತಾತ್ಕಾಲಿಕ ಬಸ್ಸು ತಂಗುದಾಣ

0

ಸುಸಜ್ಜಿನ ತಂಗುದಾಣ ನಿರ್ಮಾಣಕ್ಕೆ ಗ್ರಾ.ಪಂ. ಕ್ರಿಯಾಯೋಜನೆಯಲ್ಲಿ ಅನುದಾನ ಮಾಜಿ ಅಧ್ಯಕ್ಷ ಕೆ.ಎಂ. ಬಾಬು

ಜಾಲ್ಸೂರು ಗ್ರಾಮದ ನಡುವಡ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಳಿಸಿದ್ದ ಬಸ್ಸು ತಂಗುದಾಣ ಮುರಿದು ಬಿದ್ದಿದ್ದು, ಇದೇ ಸ್ಥಳದಲ್ಲಿ ಸುಸಜ್ಜಿತ ಬಸ್ಸು ತಂಗುದಾಣ ನಿರ್ಮಾಣಕ್ಕೆ ಗ್ರಾಮ ಪಂಚಾಯತಿ ಕ್ರಿಯಾಯೋಜನೆಯ ವತಿಯಿಂದ ಅನುದಾನ ಮೀಸಲಿರಿಸಿರುವುದಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಅವರು ತಿಳಿಸಿದ್ದಾರೆ.

ನಡುವಡ್ಕ ಜಮ್ಮಾ ಮಸೀದಿಯ ಪಕ್ಕದ ಮುಖ್ಯರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಳಿಸಿದ್ದ ಬಸ್ಸು ತಂಗುದಾಣ ಕಳೆದ ಕೆಲ ದಿನಗಳ ಹಿಂದೆ ಮುರಿದು ಬಿದ್ದಿದೆ.
ಈ ಬಗ್ಗೆ ಜಾಲ್ಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಅವರಲ್ಲಿ ವಿಚಾರಿಸಿದಾಗ ತಾವು ಗ್ರಾ.ಪಂ. ಅಧ್ಯಕ್ಷರಾಗಿದ್ದ ವೇಳೆ ನಡುವಡ್ಕ ಪ್ರಯಾಣಿಕರ ಬಸ್ಸು ತಂಗುದಾಣಕ್ಕೆ ಕ್ರಿಯಾಯೋಜನೆಯಲ್ಲಿ ಒಂದು ಲಕ್ಷ ರೂ. ಅನುದಾನ ಇರಿಸಿದ್ದು, ಮುಂದೆ ಸುಸಜ್ಜಿತ ಬಸ್ಸು ತಂಗುದಾಣ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.