ಪಂಜ ಲಯನ್ಸ್ ಕ್ಲಬ್ ವತಿಯಿಂದ ಅನ್ನಭಾಗ್ಯ ಯೋಜನೆ

0

ಸೇವಾ ಕಾರ್ಯದಿಂದ ಸಮಾಜಕ್ಕೆ ಒಳಿತು ಮಾಡುವುದರಿಂದ ಸಿಗುವ ಸಂತೋಷ ಆತ್ಮ ತೃಪ್ತಿ ಮತ್ತೊಂದಿಲ್ಲ : ಲl ಸಂತೋಷ್ ಜಾಕೆ

ಜನಸೇವೆಯಲ್ಲಿ ದೇವರನ್ನ ಕಾಣುವ ಲಯನ್ಸ್ ಸಂಸ್ಥೆ ಅತಿ ದೊಡ್ಡ ಸೇವ ಸಂಸ್ಥೆಯಾಗಿದೆ : ಲl ದಿಲೀಪ್ ಬಾಬ್ಲುಬೆಟ್ಟು

ಲಯನ್ಸ್ ಕ್ಲಬ್ ಪಂಜ ವತಿಯಿಂದ ನಡೆದ “ಅನ್ನಭಾಗ್ಯ ಯೋಜನೆ”. ಆಯ್ದ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಅಕ್ಕಿ ವಿತರಣೆ ಕಾರ್ಯಕ್ರಮದ ಉದ್ಘಾಟನೆಯು,ಪಂಜ ಗ್ರಾಮ ಪಂಚಾಯಿತಿ ಸಭಾಭವನದಲ್ಲಿನಡೆಯಿತು.


ಕಾರ್ಯಕ್ರಮವನ್ನು, ವಲಯ 1ರ ವಲಯಾದ್ಯಕ್ಷ ಲ l ಸಂತೋಷ್ ಜಾಕೆ ಉದ್ಘಾಟಿ ಸಿದರು. ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ಲl ದಿಲೀಪ್ ಬಾಬ್ಲುಬೆಟ್ಟು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಲ l ಅನುರಾಜ ಕಕ್ಯನ, ಉಪಸ್ಥಿತರಿದ್ದರು, ಕಾರ್ಯದರ್ಶಿ ಲl ವಾಸುದೇವ ಮೇಲ್ಬಾಡಿ ಸ್ವಾಗತಿಸಿ, ಕೋಶಾಧಿಕಾರಿ ಲl ಆನಂದ ಗೌಡ ಜಳಕದ ಹೊಳೆ ವಂದಿಸಿದರು.


ಕಾರ್ಯಕ್ರಮದಲ್ಲಿ ನಿಕಟ ಪೂರ್ವಧ್ಯಕ್ಷ ಲl ಪುರುಷೋತ್ತಮ ದoಬೆ ಕೋಡಿ, ಪೂರ್ವಾದ್ಯಕ್ಷರುಗಳಾದ ಲl ಸುರೇಶ್ ನಡ್ಕ, ಲl ಬಾಲಕೃಷ್ಣ ಗೌಡ ಮೂಲೆಮನೆ, ಲl ಕುಮಾರಸ್ವಾಮಿ, ಸಂಸ್ಥೆಯ ಸದಸ್ಯರಾದ ಲl ಕೇಶವ ಗೌಡ, ಲl ಶಶಿಧರ ಪಳಂಗಾಯ, ಲl ನಾಗೇಶ್ ಕಿನ್ನಿಕುಮ್ರಿ, ಲl ಪ್ರಶಾಂತ್ ಮುರುಳ್ಯ, ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.