ಸುಬ್ರಹ್ಮಣ್ಯ:ಎಸ್.ಎಸ್. ಪಿ.ಯು ಕಾಲೇಜಿಗೆ ಮುಜರಾಯಿ ಆಯುಕ್ತರ ಭೇಟಿ, ಕಾಲೇಜಿನ ವಿದ್ಯಾರ್ಥಿಗಳಿಂದಅದ್ದೂರಿ ಸ್ವಾಗತ

0

ಶೇ. 100 ಫಲಿತಾಂಶವೇ ನನಗೆ ಕೊಡುವ ಗಿಪ್ಟ್ : ಎಚ್.ಬಸವರಾಜೇಂದ್ರ

ಸುಬ್ರಹ್ಮಣ್ಯದ ಎಸ್ ಎಸ್ ಪಿಯು ಕಾಲೇಜಿಗೆ ಸೆ.7 ರಾಜ್ಯ ಮುಜರಾಯಿ ಆಯುಕ್ತ ಎಚ್.ಬಸವರಾಜೇಂದ್ರ ಭೇಟಿ ನೀಡಿದ್ದು ಅವರನ್ನು ಕಾಲೇಜಿನ ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

ಸುಮಾರು 1110ವಿದ್ಯಾರ್ಥಿಗಳು
ಕಾಲೇಜಿನ ಗೇಟ್ ನಿಂದ ಕಾಲೇಜಿನ ತನಕ ಇಕ್ಕೆಲದಲ್ಲಿ ಸಾಗಿ ನಿಂತು ಪುಷ್ಪಾರ್ಚನೆ ಮಾಡಿದರು.


ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿವೃದ್ಧಿ ಶುಲ್ಕ ಕಡಿತಗೊಳಿಸಿ ಕಾಲೇಜಿನ ಶುಲ್ಕವನ್ನು ಅತೀ ಕಡಿಮೆ ಗೊಳಿಸಿ ಸಹಕಾರ ನೀಡಿದ ಆಯುಕ್ತರಿಗೆ ಧನ್ಯವಾದ ಸಮರ್ಪಿ ಸಿದರು.

100℅ ಫಲಿತಾಂಶವೇ ನನಗೆ ಕೊಡುವ ಗಿಪ್ಟ್:
ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಅಭಿವೃದ್ಧಿ ಶುಲ್ಕ ವನ್ನು ಕಡಿತಗೊಳಿಸಿರುವುದರಿಂದ ಗ್ರಾಮೀಣ ಪ್ರದೇಶವಾದ ಈ ಭಾಗದ ಮಕ್ಕಳಿಗೆ ಹೆಚ್ಚಿನ ಅನುಕೂಲತೆ ಒದಗಿದೆ ಅನ್ನುವುದು ಸಂತಸಕರ. ಮುಂದಿನ ಅಂತಿಮ ಪರೀಕ್ಷೆಯಲ್ಲಿ 100℅ ಫಲಿತಾಂಶ
ತರುವುದೇ ನನಗೆ ಕೊಡಬೇಕಾದ ಗಿಪ್ಟ್ ಎಂದು ನುಡಿದರು.

ಗೌರವಾರ್ಪಣೆ:
ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಿದ ಮತ್ತು ಉಪನ್ಯಾಸಕರಿಗೆ ಶ್ರೀ ದೇವಳದಿಂದ ವೇತನ ಒದಗಿಸಿದ ಆಯುಕ್ತರಿಗೆ ಕಾಲೇಜಿನ ವತಿಯಿಂದ ಗೌರವಾರ್ಪಣೆ ಅರ್ಪಿಸಲಾಯಿತು..
ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್, ಮುಖ್ಯಗುರು ಕೆ.ಯಶವಂತ ರೈ ಸೇರಿದಂತೆ ಶ್ರೀ ದೇವಳದ ಸಿಬ್ಬಂದಿಗಳು ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.