ಗುತ್ತಿಗಾರಿನಲ್ಲಿ ಅಕ್ಯುಪ್ರೆಶರ್ ಥೆರಪಿ ಕಾರ್ಯಾಗಾರ

0

ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಮತ್ತು ಯುವಕ ಮಂಡಲ ಗುತ್ತಿಗಾರು ಇವರ ಆಶ್ರಯದಲ್ಲಿ ಸೆ.11 ರಂದು ಅಕ್ಯುಪ್ರೆಶರ್ ಥೆರಪಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.

ಅಂಗೈಯಲ್ಲಿ ಆರೋಗ್ಯ ಎಂಬ ವಿಚಾರದ ಬಗ್ಗೆ ಆರೋಗ್ಯ ಮಾಹಿತಿ ಕಾರ್ಯಾಗಾರವನ್ನು
ಜನಾರ್ಧನ ಗೌಡ ಚೈಪೆ, ಆಜಡ್ಕ ನಡೆಸಿಕೊಟ್ಟರು. ಭಜನಾ ಮಂದಿರದ ಅಧ್ಯಕ್ಷರಾದ ರವಿಪ್ರಕಾಶ್ ಬಿ ವಿ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗೌರವಾಧ್ಯಕ್ಷರಾದ ಕಿಶೋರ್ ಕುಮಾರ್ ಬೊಮ್ಮದೇರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.