ಹಳೆಗೇಟು : ರಿಕ್ಷಾ ಚಾಲಕ ಮತ್ತು ಪ್ರಯಾಣಿಕರಿಂದ ಹಲ್ಲೆ, ದರೋಡೆ – ಪ್ರಕರಣ ದಾಖಲು

0

ಸುಳ್ಯ ಹಳೆಗೇಟು ಸಮೀಪ ಮಡಕೇರಿ ಮೂಲದ ಕಾರುಗುಂದ ಗ್ರಾಮ ನಿವಾಸಿ ದರ್ಶನ್ ಎಂಬುವರ ಹಣ ಮತ್ತು ತಮ್ಮ ಅಗತ್ಯ ಧಾಖಲೆಗಳುಳ್ಳ ಬ್ಯಾಗನ್ನು ದರೋಡೆಗೈದ ಘಟನೆ ವರದಿಯಾಗಿದೆ. ಸೆ. 18 ರಂದು ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದ ದರ್ಶನ್ ರಾತ್ರಿ ಸುಮಾರು 11:15 ಗಂಟೆಗೆ ಊರಿಗೆ ಹಿಂತಿರುಗುವ ಸಲುವಾಗಿ, ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳಲು ಹಳೆಗೇಟಿನಲ್ಲಿ ಆಟೋರಿಕ್ಷಾ ವೊಂದನ್ನು ಹತ್ತಿದ್ದರು. ಈ ವೇಳೆ ಆಟೋದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ದರ್ಶನ್ ಆಟೋದಲ್ಲಿ ಕುಳಿತ ಕೂಡಲೇ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ಬ್ಯಾಗ್ ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಆತ ಪ್ರತಿರೋಧ ತೋರಿದಾಗ ಆತನ ಮೇಲೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾದರೆಂದು ತಿಳಿದು ಬಂದಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.