ಮೊಗರ್ಪಣೆ ಮಸೀದಿ ಮುಂಭಾಗದಿಂದ ಸ್ಕೂಟಿ ಕಳವು

0

ಮೊಗರ್ಪಣೆ ಮಸೀದಿಗೆ ನಮಾಜಿಗೆ ಬಂದ ವ್ಯಕ್ತಿಯೊಬ್ಬರ ಎವಿಟಯೇರ್ ದ್ವಿಚಕ್ರವಾಹನ ಕಳವು ನಡೆದ ಘಟನೆ ಇಂದು ಸಂಜೆ ವರದಿಯಾಗಿದೆ.

ಜಯನಗರ ನಿವಾಸಿ ಜಿ ಕೆ ರಜಾಕ್ ಎಂಬುವವರು ನಮಾಜಿಗೆ ಬಂದು ನಮಾಜ್ ಮುಗಿಸಿ ರಸ್ತೆ ಬಳಿ ಬಂದಾಗ ತಾನು ಅಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಾಣೆಯಾಗಿತ್ತು.

ವಾಹನ ಕಳ್ಳತನ ಆಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.