ನೆಹರು ಮೆಮೋರಿಯಲ್ ಕಾಲೇಜು: ರಾಷ್ಟ್ರೀಯ ಏಕತಾ ದಿನಾಚರಣೆ

0

ನೆಹರು ಮೆಮೋರಿಯಲ್ ಕಾಲೇಜು ಸುಳ್ಯಇದರ ಐಕ್ಯುಎಸಿ ಮತ್ತುವ್ಯವಹಾರ ಆಡಳಿತ ವಿಭಾಗ ಜಂಟಿ ಆಶ್ರಯದಲ್ಲಿರಾಷ್ಟ್ರೀಯ ಏಕತಾ ದಿನಾಚರಣೆ ಅ.೩೧ರಂದು ಆಚರಿಸಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲ್ ಇವರ ಜನ್ಮದಿನಾಚರಣೆಯ ಸ್ಮರಣಾರ್ಥ ನಡೆದ ಈ ಕಾರ್ಯಕ್ರಮದ ಈ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದಪ್ರೊ. ರುದ್ರಕುಮಾರ್ ಎಂ.ಎಂಇವರು ವಹಿಸಿದ್ದರು.

ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಡಾ. ಮಮತಾ ಕೆ, ಐಕ್ಯುಎಸಿ ಸಂಯೋಜಕಿ ಇವರು ಬೋಧಿಸಿದರು. ಶ್ರೀಮತಿ ಅನಂತಲಕ್ಷ್ಮಿ, ವಿಭಾಗ ಮುಖ್ಯಸ್ಥರು, ವ್ಯವಹಾರ ಆಡಳಿತ ವಿಭಾಗ ಇವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀಮತಿ ರತ್ನಾವತಿ ಡಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಬೋಧಕ/ಬೋಧಕೇತರ ವೃಂದ ಮತ್ತುವಿದ್ಯಾರ್ಥಿ ಸಮೂಹ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದು, ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.


ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೊಲಾಜ್ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಿ, ಬಹುಮಾನ ವಿತರಣೆಯನ್ನು ಮಾಡಲಾಯಿತು. ಶ್ರೀಮತಿ ಲೀನಾ ಉಪನ್ಯಾಸಕಿ ವ್ಯವಹಾರ ಆಡಳಿತ ವಿಭಾಗರವರು ವಂದಿಸಿದರು.