ಕೃಷ್ಣ ನಾಯ್ಕ ಕೀಲಾರು ಮೂಲೆ ನಿಧನ

0

ದ.ಕ. ಸಂಪಾಜೆ ಗ್ರಾಮದ ಕೀಲಾರುಮೂಲೆ ನಿವಾಸಿ ಕೃಷ್ಣನಾಯ್ಕ ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.2ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಬುಟ್ಟಿ ಹೆಣೆಯುವುದರಲ್ಲಿ ಪ್ರಸಿದ್ಧಿ ಪಡೆದಿದ್ದ ಕೃಷ್ಣ ನಾಯ್ಕರು ಇದರ ಮೂಲಕವೇ ತಮ್ಮ ಬದುಕು ಕಟ್ಟಿಕೊಂಡಿದ್ದರು. ಇದನ್ನು ಗುರುತಿಸಿ, ಇತ್ತೀಚೆಗೆ ನಡೆದ ಸಂಪಾಜೆ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಗಿತ್ತು.
ಮೃತರು ಪುತ್ರ ಜನಾರ್ದನ, ಪುತ್ರಿಯರಾದ ತುಳಸಿ, ಹೇಮಲತ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.