ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ತನುಷ್ ಕೆ ಆರ್ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಕರ್ನಾಟಕ ಯೋಗ ಅಸೋಸಿಯೇಷನ್
ಓಂಕಾರ ಆಶ್ರಮ, ಓಂಕಾರ್ ಹಿಲ್ಸ್ , ರಾಜರಾಜೇಶ್ವರಿ ಬೆಂಗಳೂರಿನಲ್ಲಿ ಆಯೋಜಿಸಲಾದ 42ನೇ ಪದಕ ವಿಜೇತ ಯೋಗಾಸನ ಚಾಂಪಿಯನ್‌ಶಿಪ್ -2023 ರ ಸ್ಪರ್ಧೆಯಲ್ಲಿ
8-14 ವರ್ಷ ಒಳಗಿನ ವಯೋಮಾನದ ಬಾಲಕರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ತನುಷ್ ಕೆ.ಆರ್ ಬೆಳ್ಳಿ ಪದಕ ಪಡೆದು ಪಶ್ಚಿಮ ಬಂಗಾಳದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ರವಿ ಹಾಗೂ ಪ್ರಜ್ಞಾ ದಂಪತಿಗಳ ಪುತ್ರ.

ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಶಿಕ್ಷಕರಾದ
ಸಂತೋಷ್ ಮುಂಡಕಜೆಯವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.