ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

0

ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ರಿ. ಆಶ್ರಯದಲ್ಲಿ 20ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನ.12 ರಂದು ವಿವಿಧ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಸಭಾ ಕಾರ್ಯಕ್ರಮ ನಡೆದಿದ್ದು ಸದಾಸಿದ್ಧಿ ಮಿತ್ರಬಳಗ ಬೀದಿಗುಡ್ಡೆ ಇದರ ಅಧ್ಯಕ್ಷರಾದ ದೀಕ್ಷಿತ್ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಬಳ್ಪ ಗ್ರಾ.ಪಂ ಅಧ್ಯಕ್ಷರಾದ ಹರ್ಷಿತ್ ಕಾರ್ಜ, ಬಿಜೆಪಿ ಮುಖಂಡರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುರುಳ್ಯ ಗ್ತಾ.ಪಂ ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ, ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನ ದ ಕಾಂಜಿ ಇದರ ಉತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಸದಾನಂದ ರೈ ಅರ್ಗುಡಿ, ಸಿದ್ದಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಇದರ ಅಧ್ಯಕ್ಷರಾದ ಎಲ್ಯಣ್ಣ ಗೌಡ ಕಟ್ಟ, ಸಂಪ್ಯಾಡಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ್ ನಡುಮನೆ, ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ ಇದರ ಅಧ್ಯಕ್ಷರಾದ ಮಹೇಶ್ ಸೂಂತಾರು ವೇದಿಕೆಯಲ್ಲಿದ್ದರು . ಅಭಿಲಾಷ್ ಕಟ್ಟ ಸ್ವಾಗತಿಸಿ, ಯದುಕುಮಾರ್ ಕಟ್ಟ ವಂದಿಸಿದರು. ಚಿದಾನಂದ ಕಲ್ಗುಡಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕಸದಾಸಿದ್ದಿಮಿತ್ರಬೀದಿಗುಡ್ಡೆಬಳಗದಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು. ಬಳಿಕ ಡ್ಯಾನ್ಸ್ & ಬೀಟ್ಸ್ ನೃತ್ಯ ಕಲಾ ಕೇಂದ್ರ ಜೀವನ್ ಬೆಳ್ಳಾರೆ ನಿರ್ದೇಶನದಲ್ಲಿ “ನೃತ್ಯ ವೈವಿಧ್ಯ” ಕಾರ್ಯಕ್ರಮ ನಡೆಯಿತು.

ಆ ಬಳಿಕ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ಸುಂದರ ರೈ ಮಂದಾರ ನಿರ್ದೇಶಿಸಿ ಅಭಿನಯಿಸಿದ ಹಾಸ್ಯಯುತ ಸಾಮಾಜಿಕ ನಾಟಕ “ಅಮ್ಮೆರ್” ಪ್ರದರ್ಶನಗೊಂಡಿತು.