ಚೆಂಬು: ಡಬ್ಬಡ್ಕ- ಕಾಂತಬೈಲು ಗ್ರಾಮ ಅರಣ್ಯ ಸಮಿತಿ ರಚನೆ

0

ಚೆಂಬು ಗ್ರಾಮದ ಡಬ್ಬಡ್ಕ- ಕಾಂತು ಬೈಲು ಗ್ರಾಮ ಅರಣ್ಯ ಸಮಿತಿಯನ್ನು ನ.27ರಂದು ರಚಿಸಲಾಯಿತು.

ಅಧ್ಯಕ್ಷರಾಗಿ ಭವಾನಿ ಕುಮಾರ್ ಕೊಪ್ಪ, ಕಾರ್ಯದರ್ಶಿಯಾಗಿ ಉಪವಲಯಾರಣ್ಯ
ಧಿಕಾರಿ ನಿಸಾರ್ ಅಹಮದ್ ,ಪದಾಧಿಕಾರಿಗಳಾಗಿ ಸಚೀಂದ್ರ ಕೆದಂಬಾಡಿ, ಪುಲತಾಕ್ಷಿ ಕೂಸಪ್ಪ ಉಳುವಾರು ,ಸುಶೀಲ ಕೆದಂಬಾಡಿ, ದಿನಕರ ಜಿಎಸ್ ,ಯತೀಶ್ ಕೆದಂಬಾಡಿ, ಭುವನೇಶ್ವರ ಕೊಪ್ಪ ,ಉದಯಕುಮಾರ್ ಕೆ.ಆರ್ ಆಯ್ಕೆಯಾದರು.

ಈ ಸಂದರ್ಭ ನಿಕಟ ಪೂರ್ವ ಅಧ್ಯಕ್ಷರಾದ ಮನೋಜ್ ಕೆದಂಬಾಡಿ ,ಪದಾಧಿಕಾರಿಗಳಾದ ಮಹೇಶ್ವರ ಭಟ್ ,ಶ್ರೀಕಾಂತ್ , ನೋಡೆಲ್ ಅಧಿಕಾರಿಯಾದ ಸುನಂದ ಕುಮಾರ್, ಗೋವಿಂದರಾಜು ,ಗ್ರಾಮ ಪಂಚಾಯತಿ ಸದಸ್ಯರಾದ ಗಿರೀಶ್ ಹೊಸೂರ್ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರು ಸರಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.
ಅರಣ್ಯ ರಕ್ಷಕರಾದ ಕಾರ್ತಿಕ್ ಸ್ವಾಗತಿಸಿ, ಅರಣ್ಯ ರಕ್ಷಕರಾದ ಚಂದಪ್ಪ ಬಣಕರ್ ವಂದಿಸಿದರು.