ಸ್ವಚ್ಛತೆಯ ಜಾಗೃತಿ ಕಾರ್ಯ ನಿರಂತರವಿರಲಿ : ಡಾ| ಗಿರೀಶ್ ಭಾರದ್ವಾಜ್

0


ಪಯಸ್ವಿನಿ ಯುವಕ ಮಂಡಲದಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಊರಿನ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ. ಈ ಕಾರ್ಯದಲ್ಲಿ ಎಲ್ಲರೂ ಸೇರಿಕೊಳ್ಳಬೇಕು. ಸ್ವಚ್ಛತೆಯ ಜಾಗೃತಿ ನಿರಂತರವಾಗಿದ್ದಾಗ ಆರೋಗ್ಯವೂ ಚೆನ್ನಾಗಿರುತ್ತದೆ. ಯುವಕ ಸಂಘಗಳು ಈ ರೀತಿಯ ಕಾರ್ಯ ನಡೆಸುವುದು ಶ್ಲಾಘನೀಯ ಎಂದು ಪದ್ಮಶ್ರೀ ಪುರಸ್ಕೃತ, ತೂಗುಸೇತುವೆಗಳ ಸರಕಾರ ಡಾ| ಗಿರೀಶ್ ಭಾರದ್ವಾಜ್ ಹೇಳಿದರು.
ಪಯಸ್ವಿನಿ ಯುವಕ ಮಂಡಲ ಕೇರ್ಪಳ ಇದರ ಆಶ್ರಯದಲ್ಲಿ ಡಿ.೩ರಂದು ಕೇರ್ಪಳ ವಸಂತ ಕಟ್ಟೆಯ ಬಳಿಯಿಂದ ನಡೆದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಯುವಕ ಮಂಡಲದ ೩೦ರ ಸಂಭ್ರಮದ ಆಮಂತ್ರಣ ಬಿಡುಗಡೆಗೊಳಿಸಿ ಅವರು ಶುಭಹಾರೈಸಿದರು.


ಅಭಿಯಾನದಲ್ಲಿ ಉದ್ಯಮಿ ಧನಂಜಯ ಕಾಸಿನಗೋಡ್ಲು, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಸುಧಾಕರ ಕುರುಂಜಿಭಾಗ್, ಪೂಜಿತಾ ಕೆ.ಯು., ಚೆನ್ನಕೇಶವ ವಸಂತ ಕಟ್ಟೆ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯರ್, ಪ್ರಮುಖರಾದ ಶಿವರಾಮ ಕೇರ್ಪಳ ಕೆವಿಜಿಪಿ, ತೀರ್ಥರಾಮ ಕೇರ್ಪಳ, ಚಂದ್ರಪ್ರಕಾಶ್ ಕೇರ್ಪಳ, ಚಂದ್ರಶೇಖರ ಕೇರ್ಪಳ, ಅನಿಲ್ ಮೆಸ್ಕಾಂ ಹಾಗೂ ಯುವಕ ಮಂಡಲದ ಪದಾಧಿಕಾರಿಗಳು ಇದ್ದರು.


ಭರತ್ ಕುರುಂಜಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಶಿವರಾಮ ಕೇರ್ಪಳ ವಂದಿಸಿದರು.