ಜ.11ರಂದು ಸುಳ್ಯ ಜಾತ್ರೆಯಲ್ಲಿ ಅಶಕ್ತ ಬಡ ಕುಟುಂಬಗಳಿಗಾಗಿ ಸೇವಾ ನಿಧಿ ಯೋಜನೆಗೆ ಚಾಲನೆ

0

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಅಶಕ್ತ ಬಡ ಕುಟುಂಬಗಳಿಗೆ ನೆರವಿನ ಹಸ್ತ ನೀಡುವ ಸಲುವಾಗಿ ಯುವ ಶಕ್ತಿ ಸೇವಾ ಪಥದ ಸುಳ್ಯ ಸೇವಾಶ್ರಯ ಸೇವಾ ನಿಧಿ ಯೋಜನೆ ಜ.11 ರಂದು ಹಮ್ಮಿಕೊಳ್ಳಲಾಗಿದೆ. ಯುವ ಬ್ರಿಗೇಡ್ ಸುಳ್ಯ,
ಅರಂತೋಡು ಅಡ್ತಲೆ
ಸ್ಪಂದನ ಗೆಳೆಯರ ಬಳಗ‌ ಹಾಗೂ ಯುವ ಶಕ್ತಿ ಸೇವಾ ಪಥದ ನೇತೃತ್ವದಲ್ಲಿ‌ ಸೇವಾ ಕಾರ್ಯ ನಡೆಯಲಿರುವುದು. ಅಶಕ್ತರನ್ನು ಶಕ್ತರನ್ನಾಗಿಸುವ ಯೋಜನೆಗೆ ಸಾರ್ವಜನಿಕರು ಸಹಕರಿಸುವಂತೆ ಸಂಘಟಕರು ವಿನಂತಿಸಿರುತ್ತಾರೆ.