ಕೊಡಿಯಾಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಯ ವಾರ್ಷಿಕೋತ್ಸವ, ನಗರ ಭಜನೆಗೆ ಚಾಲನೆ

0

ಕಲ್ಲಗದ್ದೆ, ಕೊಡಿಯಾಲ
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಇದರ 49ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ನಗರ ಭಜನಾ ಕಾರ್ಯಕ್ರಮಕ್ಕೆ ಜ. 25ರಂದು ಚಾಲನೆ ದೊರೆಯಿತು.


ಜ. 25ರಂದು ಸಂಜೆ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ಪುತ್ತೂರು ಟಿ.ಎ.ಪಿ.ಸಿ.ಎಂ.ಎಸ್. ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್ವಾರ ನಾರಾಯಣ ಗೌಡ ಪುತ್ತೂರು, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಆಳ್ವ ಬೇರ್ಯ, ಪ್ರಗತಿಪರ ಕೃಷಿಕರಾದ ಉದಯಶಂಕರ ಕುರಿಯಾಜೆ ಮತ್ತು ದಿನೇಶ್ ಚೋಡಿಪಣೆ, ಪಟ್ಟೆ ಜ್ಯೋತಿ ಬೆಳಗಿಸಿ ನಗರ ಭಜನೆಗೆ ಚಾಲನೆ ನೀಡಿದರು. ಭಜನಾ‌ ಮಂಡಳಿಯ ಗೌರವಾಧ್ಯಕ್ಷ ವಿಠಲ‌ ಸಾಮಾಮಿ ಮತ್ತು ಬೆಳ್ಳಾರೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ಆನಂದ ಗೌಡ ಪೆರಿಯಾಣ ಗೌರವ ಉಪಸ್ಥಿತರಿದ್ದರು. ಭಜನಾ ಮಂಡಳಿ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀರಾಮ ಪಾಟಾಜೆ, ಆರ್ವಾರ ನಾರಾಯಣ ಗೌಡ, ಈಶ್ವರ ಆಳ್ವ ಬೇರ್ಯ, ಉದಯಶಂಕರ್ ಕುರಿಯಾಜೆ, ದಿನೇಶ್ ಚೋಡಿಪಣೆ, ಪಟ್ಟೆ ಮತ್ತು ಸುಳ್ಯ ಸುದ್ದಿ ವರದಿಗಾರ ಈಶ್ವರ ವಾರಣಾಶಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ್ದ ಶೇಷಪ್ಪ ಆಚಾರ್ಯ ನಿಡ್ಮಾರುರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಭಜನಾ‌ ಮಂಡಳಿಯ ಉಪಾಧ್ಯಕ್ಷರುಗಳಾದ ಭಾಸ್ಕರ ಗೌಡ ಹಡೀಲು, ಗಂಗಾಧರ ಆಚಾರ್ಯ, ಕಾರ್ಯದರ್ಶಿ ಸೀತಾರಾಮ ಗೌಡ ಕೆ ಗುತ್ತಿನಮನೆ, ಜತೆ ಕಾರ್ಯದರ್ಶಿ ದಾಮೋದರ ಪಟ್ರೆ ಮತ್ತು ಮಂಡಳಿ ಸದಸ್ಯರು ಸಹಕಾರ ನೀಡಿದರು. ದೇವಳದ ಅರ್ಚಕರಾದ ಶಂಕರನಾರಾಯಣ ಮಯ್ಯ ದೇವತಾ ಪ್ರಾರ್ಥನೆ ನೆರವೇರಿಸಿದರು. ಮಾ. 2ರಂದು ನಗರ ಭಜನೆ ಮುಕ್ತಾಯಗೊಂಡು, ಸತ್ಯನಾರಾಯಣ ಪೂಜೆ, ಸಭಾ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಂದು ಭಜನಾ ಮಂಡಳಿ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ತಿಳಿಸಿದ್ದಾರೆ.