ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಳ್ಪಕೊರಪ್ಪಣೆ ಶ್ರೀ ದುರ್ಗಾ ದನ್ವಂತರಿ ಮಹಾವಿಷ್ಣು ದೇವಸ್ಥಾನಕ್ಕೆ ರೂ1.5 ಲಕ್ಷ ಅನುದಾನ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಳ್ಪ ಕೊರಪ್ಪಣೆ ಶ್ರೀ ದುರ್ಗಾ ದನ್ವಂತರಿ ಮಹಾವಿಷ್ಣು ದೇವಸ್ಥಾನಕ್ಕೆ ರೂ.1.5 ಲಕ್ಷ ಅನುದಾನ ಮಂಜೂರಾತಿ ಆಗಿದ್ದು,ಈ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್,ಸುಳ್ಯ ತಾಲ್ಲೂಕಿನ ಯೋಜನಾಧಿಕಾರಿ ನಾಗೇಶ್ ಪಿ. ರವರು ದೇವಸ್ಥಾನದ ಅರ್ಚಕ ಸುಬ್ರಮಣ್ಯ ಭಟ್ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅಕ್ಕೆನಿಯವರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಚಿನ್ನಪ್ಪ ಪೂಜಾರಿ ಕೊರಪ್ಪಣೆ, ಮುರಳಿ ಭಟ್ ಕಲ್ಲೇರಿ, ಸುಬ್ರಮಣ್ಯ ಭಟ್ ಕಲ್ಲೇರಿ, ಗಂಗಾಧರ ಕೊರಪ್ಪಣೆ, ಶ್ರೀಮತಿ ಜಯಶೀಲಾ ಭೋಜಪ್ಪ ಕುಳ, ಹಾಗೂ ಎಣ್ಣೆಮಜಲು ಒಕ್ಕೂಟದ ಅಧ್ಯಕ್ಷ ಶ್ರೀಮತಿ ಶೈಲಜಾ ಸದಾಶಿವ, ಒಕ್ಕೂಟದ ಉಪಾದ್ಯಕ್ಷ ಚಿದಾನಂದ ಕಲ್ಲೇರಿ,ವಲಯದ ಮೇಲ್ವಿಚಾರಕರಾದ ಶ್ರೀಮತಿ ಕಲಾವತಿ ಪಿ.ಬಿ,ಬಳ್ಪ ಗ್ರಾಮದ ಸೇವಾಪ್ರತಿನಿಧಿ ಶ್ರೀಮತಿ ಭವ್ಯ ಅಚ್ಚುತ ಕಾಯರ ಮತ್ತು
ಎಣ್ಣೆಮಜಲು ಒಕ್ಕೂಟದ ಪ್ರಗತಿಬಂದು ಸ್ವ ಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.