ಮಡಪ್ಪಾಡಿ : ಕರುಣಾಕರ ನಡುಬೆಟ್ಟು ಹೃದಯಾಘಾತದಿಂದ ನಿಧನ

0

ಮಡಪ್ಪಾಡಿ ಗ್ರಾಮದ ನಡುಬೆಟ್ಟು ಕರುಣಾಕರ ಎಂಬವರು ಮಡಿಕೇರಿಯಲ್ಲಿ ಹೃದಯಾಘಾತಗೊಂಡು ನಿಧನರಾದ ಘಟನೆ ಇಂದು ವರದಿಯಾಗಿದೆ.‌

ಮಡಪ್ಪಾಡಿ ಗ್ರಾಮದ ಪುರುಷೋತ್ತಮ ಎಂಬವರು ನಡೆಸುತ್ತಿದ್ದ ಕೋಳಿ ಫಾರಂಗೆ ಕೋಳಿ ಆಹಾರ ತರಲು ಪುರುಷೋತ್ತಮರೊಂದಿಗೆ ನಡುಬೆಟ್ಟು ಕರುಣಾಕರರವರು ಮಡಿಕೇರಿಗೆ ಇಂದು ಬೆಳಿಗ್ಗೆ ತೆರಳಿದ್ದರು. ಅಲ್ಲಿ ವಾಹನಕ್ಕೆ ಕೋಳಿ ಆಹಾರ ಲೋಡ್ ಆಗುತ್ತಿದ್ದ ಸಂದರ್ಭ ಕರುಣಾಕರರವರು ಒಮ್ಮಿಂದೊಮ್ಮೆಲೆ ಕುಸಿದು ಬಿದ್ದರೆಂದೂ ತಕ್ಷಣ ಅಲ್ಲಿದ್ದವರು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋದರೆನ್ನಲಾಗಿದೆ. ಆ ಸಂದರ್ಭದ ಅವರು ಹೃದಯಾಘಾತದಿಂದ ನಿಧನರಾಗಿರುವ ಬಗ್ಗೆ ವೈದ್ಯರು ದೃಢಪಡಿಸಿದರೆಂದು ತಿಳಿದು ಬಂದಿದೆ.

ಮೃತರು ಪತ್ನಿ ನಮಿತಾ ಹಾಗೂ ಎರಡು ಹೆಣ್ಣು ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.