ರಕ್ತದಾನಿಗಳಿಗೆ ಜಿಲ್ಲಾ ಮಟ್ಟದ ಗೌರವಕ್ಕೆ ಹೆಸರು ನೀಡುವಂತೆ‌ ರೆಡ್ ಕ್ರಾಸ್ ಸಭಾಪತಿ ಸುಧಾಕರ ರೈಯವರಿಂದ ಪ್ರಕಟಣೆ

0

ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜಿಲ್ಲೆಯಾದ್ಯಂತ ರಕ್ತದಾನಿ ಗಳನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮದ ಅಂಗವಾಗಿ15 ಬಾರಿಗಿಂತ ಹೆಚ್ಚು ಸಲ ರಕ್ತದಾನ ಮಾಡಿದಂತ
ದಾನಿಗಳನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸಿ ಗೌರವಿಸಿ, ಸನ್ಮಾನಿಸುವಂಥ ಕಾರ್ಯಕ್ರಮವಿದೆ. ಸುಳ್ಯ ತಾಲೂಕಿನ ರಕ್ತದಾನಿ ಬಂಧುಗಳು ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಮಿತಿಯ
ಪಿ.ಬಿ ಸುಧಾಕರ್ ರೈ ಸಭಾಪತಿಗಳು,
ತಿಪ್ಪೇಶಪ್ಪ ಗೌರವ ಕಾರ್ಯದರ್ಶಿಗಳು,
ಸಿಎ ಗಣೇಶ್ ಭಟ್
ಜಿಲ್ಲಾ ಪ್ರತಿನಿಧಿಗಳು ಇವರುಗಳನ್ನು ದಾಖಲೆ ಸಮೇತ ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಾಖಲೆ ಸಮೇತ ಸಂಪರ್ಕಿಸಲು ಕೊನೆಯ ದಿನಾಂಕ 12.6.2024 ಆಗಿರುತ್ತದೆ.