ನಿವೃತ್ತ ಶಿಕ್ಷಕ ನರಿಯೂರು ಭಾಸ್ಕರ ಗೌಡರಿಗೆ ಗೌರವಾರ್ಪಣೆ

0

ಇತ್ತೀಚಿಗೆ ತನ್ನ ಸರಕಾರಿ ಸೇವೆಯಿಂದ ನಿವೃತ್ತಗೊಂಡ ಕಾವು ಶಾಲಾ ನಿವೃತ್ತ ಶಿಕ್ಷಕ ಭಾಸ್ಕರ ಗೌಡ ನರಿಯೂರು ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ಜೂ. 9ರಂದು ಅವರ ಮನೆಯಲ್ಲಿ ನಡೆಯಿತು.

ಆಗಮಿಸಿದ ಅವರ ಬಂಧುಗಳು, ನೆಂಟರಿಷ್ಟರು, ಸ್ನೇಹಿತರು, ಕುಟುಂಬ ವರ್ಗದವರು, ಅತಿಥಿಗಳು ಗುಲಾಬಿ ಹೂ, ಶಾಲು, ಹಾರ, ಪೇಟಾ, ಹಣ್ಣು ಹಂಪಲು ನೀಡಿ ಭಾಸ್ಕರ ಗೌಡ – ಇಂದಿರಾ ದಂಪತಿಯವರನ್ನು ಆತ್ಮೀಯವಾಗಿ ಗೌರವಿಸಿದರು.

ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ, ಕಾವು ಶಾಲೆಯನ್ನು ದತ್ತು ಪಡೆದ ಕಾವು ಹೇಮನಾಥ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ಕಾವು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಯತೀಶ್ ಪೂಜಾರಿ, ಕಾವು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರತಿಮಾ, ಪ್ರಗತಿಪರ ರೈತ ರವಿಪ್ರಕಾಶ್ ಬುಡ್ಲೆಗುತ್ತು, ನಿವೃತ್ತ ಅಧ್ಯಾಪಕ ಗಂಗಾಧರ ಗೌಡ ಪಿಲಿಕಜೆ, ನರಿಯೂರು ತರವಾಡು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಲ್ಯಣ್ಣ ಗೌಡ ನರಿಯೂರು, ನರಿಯೂರು ಕುಟುಂಬದ ಹಿರಿಯರಾದ ಪರಮೇಶ್ವರ ಗೌಡ ನರಿಯೂರು, ನರಿಯೂರು ಕುಟುಂಬದವರು, ಹಿತೈಷಿಗಳು ಬಂಧುಗಳು ಉಪಸ್ಥಿತರಿದ್ದರು.