ಜಟ್ಟಿಪಳ್ಳ :ಅನ್ಸಾರಿಯ ಎಜುಕೇಷನ್ ಸೆಂಟರ್ ಮಾಸಿಕ ಸ್ವಲಾತ್ ಹಾಗೂ ಕೂರ ತಂಗಳ್ ರವರ ಅನುಸ್ಮರಣೆ

0

ಜಟ್ಟಿಪಳ್ಳ ಅನ್ಸಾರಿಯ ಎಜುಕೇಷನ್ ಸೆಂಟರ್ ಇದರ ವತಿಯಿಂದ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಇತ್ತೀಚಿಗೆ ನಿಧನರಾದ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ರವರ ಅನುಸ್ಮರಣೆ ಜು. 25 ರಂದು ಅನ್ಸಾರಿಯ ಸಭಾಭವನದಲ್ಲಿ ನಡೆಯಿತು.

ಗಾಂಧಿನಗರ ಜುಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಆಶ್ರಫ್ ಖಾಮಿಲ್ ಸಖಾಫಿಯವರು ಅಗಲಿದ ಸಯ್ಯಿದ್ ಕೂರತ್ ತಂಗಳ್ ರವರ ಅನುಸ್ಮರಣಾ ಭಾಷಣ ನಡೆಸಿ ತಂಗಳ್ ರವರ ಆದರ್ಶ ಜೀವನ ಚರ್ಯೆ ಕುರಿತು ಮಾತನಾಡಿದರು.

ಮಾಸಿಕ ಸ್ವಲಾತ್ ಹಾಗೂ ಸಾಮೂಹಿಕ ದುವಾ ಮಜ್ಲಿಸ್ ನೇತೃತ್ವವನ್ನು ವಹಿಸಿದ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸ್ ತಂಗಳ್ ಎಮ್ಮೆಮ್ಮಾಡು ರವರು ಪ್ರಾರ್ಥನೆ ನಡೆಸಿ ಹಿತವಚನ ನೀಡಿದರು.
ವೇದಿಕೆಯಲ್ಲಿ ಸಯ್ಯಿದ್ ಝ್ತೈನುಲ್ ಆಬಿದೀನ್ ತಂಗಳ್ ಜಯನಗರ, ಸಯ್ಯದ್ ತ್ವಾಹೀರ್ ತಂಗಳ್, ಇಕ್ರಾ ಮಸ್ಜಿದ್ ಖತಿಬರು,ಗಾಂಧಿನಗರ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಸಿ ಎಂ ಎಸ್, ಅನ್ಸಾರಿಯ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಮುಖಂಡರು ಗಳಾದ ಹಾಜಿ ಅಬ್ದುಲ್ ಶುಕೂರ್,ಆದಂ ಹಾಜಿ ಕಮ್ಮಾಡಿ, ಹಾಜಿ ಬಿ ಎಂ ಅಬೂಬಕ್ಕರ್ ಬಿ ಎಂ ಎ, ಹಾಜಿ ಹಸ್ಸನ್ ಬಾಳೆಮಕ್ಕಿ, ಶಾಫಿ ಕುತ್ತಮೊಟ್ಟೆ,ಮಹಮ್ಮದ್ ಇಕ್ಬಾಲ್ ಎಲಿಮಲೆ,ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಹಾಫಿಲ್ ಹಾಮಿದ್ ಹಿಮಮಿ ಸಖಾಫಿ ಸ್ವಾಗತಿಸಿ ನಿರೂಪಣೆ ಮಾಡಿದರು.

ಉದ್ಯಮಿ ಹಾಜಿ ಎಸ್ ಎಂ ಅಬ್ದುಲ್ ಹಮೀದ್ ರವರ ವತಿಯಿಂದ ಅವರ ದಿವಂಗತ ತಂದೆ,ತಾಯಿ ಯವರ ಹೆಸರಿನಲ್ಲಿ ಅನ್ನಧಾನ ನೀಡಿ ಸಹಕರಿಸಿದರು.ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದರು.