ಮೇನಾಲ ವಿಷ್ಣು ಯುವಕ ಮಂಡಲ ಅಧ್ಯಕ್ಷರಾಗಿ ರಂಜಿತ್ ರೈ ಮೇನಾಲ ಪುನರಾಯ್ಕೆ

0

ಅಜ್ಜಾವರ ಗ್ರಾಮದ ಮೇನಾಲ ವಿಷ್ಣು ಯುವಕ ಮಂಡಲದ ಮಹಾಸಭೆ ಅಧ್ಯಕ್ಷ ರಂಜಿತ್ ರೈ ಮೇನಾಲರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ರಂಜಿತ್ ರೈ ಮೇನಾಲ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಕುಲಾಲ್ ಮೇನಾಲ, ಕೋಶಾಧಿಕಾರಿ ಶೌಕತ್ ಅಲಿ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಶ್ರೀಧರ ಮಣಿಯಾಣಿ ಮೇನಾಲ, ಉಪಾಧ್ಯಕ್ಷ ರಾಗಿ ಶರಣ್ಯ ತುದಿಯಡ್ಕ, ಉಮೇಶ ಇರಂತಮಜಲು, ಜತೆ ಕಾರ್ಯದರ್ಶಿ ಹರ್ಷಿತ್ ರೈ ಬೇಲ್ಯ, ರಾಮ ಬಾಡೇಲು, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್ ಕಲ್ಲಗುಡ್ಡೆ, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಯತೀಶ್ ಮೇನಾಲ, ಕ್ರೀಢಾ ಕಾರ್ಯದರ್ಶಿ ಕೃಷ್ಣಪ್ಲ ಕಲ್ಲಗುಡ್ಡೆ, ಜತೆ ಕ್ರೀಡಾ ಕಾರ್ಯದರ್ಶಿ ಸಿದ್ದೀಕ್ ಇರಂತಮಜಲು, ಸಂಘಟನಾ ಕಾರ್ಯದರ್ಶಿ ಜಯಕೃಷ್ಣ ಬೇಲ್ಯ, ಜತೆ ಸಂಘಟನಾ ಕಾರ್ಯದರ್ಶಿ ಸಂದೇಶ್ ಇರಂತಮಜಲು, ನಿರ್ದೇಶಕರುಗಳಾಗಿ ನಾಗೇಶ್ ಬೇಲ್ಯ, ರಫೀಕ್ ಬೇಲ್ಯ, ಭಾಸ್ಕರ ಕಲ್ಲಗುಡ್ಡೆ, ಲೋಕೇಶ್ ಪಲ್ಲತಡ್ಕ, ಪ್ರಶಾಂತ್ ಕಲ್ಲಗುಡ್ಡೆ, ಗೌರವ ಸಲಹೆಗಾರರಾಗಿ ಪ್ರಸಾದ್ ರೈ ಮೇನಾಲ, ಹರಿಪ್ರಸಾದ್ ಸುಲಾಯ, ಮನೋಹರ ಪಲ್ಲತಡ್ಕ, ಲಕ್ಷ್ಮಣ ಪಿ.ಸಿ, ಪ್ರೇಮಚಂದ್ರ ರೈ, ದಾಮೋದರ ಕೊನ್ನೋಡಿ ಆಯ್ಕೆಯಾದರು.