ಕಾಂತಮಂಗಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

0

ಅಜ್ಜಾವರ ಗ್ರಾಮದ ಕಾಂತಮಂಗಲ ದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಮನಮೋಹನ್ ಪುತ್ತಿಲ , ಉಪಾಧ್ಯಕ್ಷರಾಗಿ ಸತೀಶ್ ಬೂಡುಮಕ್ಕಿ , ಪ್ರಧಾನ ಕಾರ್ಯದರ್ಶಿಯಾಗಿ ಸತೀಶ ಅತ್ಯಡ್ಕ, ಜೊತೆ ಕಾರ್ಯದರ್ಶಿಯಾಗಿ ಶರತ್ ಅತ್ಯಡ್ಕ , ಕೋಶಾಧಿಕಾರಿಯಾಗಿ ಮಂಜುನಾಥ ಕಾಂತಮಂಗಲ, ಮಹಿಳಾ ಘಟಕಾಧ್ಯಕ್ಷರಾಗಿ ಮಂಜುಳಾ ಬಡಿಗೇರ, ಉಪಾಧ್ಯಕ್ಷರಾಗಿ ಮೀರಾ ಕಾಂತಮಂಗಲ, ಕಾರ್ಯದರ್ಶಿಯಾಗಿ ಸರಿತ ಬಸವನಪಾದೆ, ಜೊತೆ ಕಾರ್ಯದರ್ಶಿಯಾಗಿ ಕವಿತ ಕಾಂತಮಂಗಲ, ಕೋಶಾಧಿಕಾರಿಯಾಗಿ ಚಿತ್ರ ಕಾಂತಮಂಗಲ ಆಗಿ ನೇಮಕಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಂತಮಂಗಲ ಒಕ್ಕೂಟದ ಸೇವಾ ಪ್ರತಿನಿಧಿಯವರಾದ ಸೌಮ್ಯ ಬೂಡುರವರು ಹಾಗೂ ಸಮಿತಿಯ ಸದಸ್ಯರು ಹಾಜರಿದ್ದು ಸ್ಥಳೀಯ ಮಕ್ಕಳಿಗೆ,ಯುವಕ ಯುವತಿಯರಿಗೆ, ಹಿರಿಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ನಡೆಸುವ ಮುಖಾಂತರ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.