ದೇವರಗದ್ದೆ : ನೇಣು ಬಿಗಿದು ಆತ್ಮಹತ್ಯೆ

0

ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ನೋಣಪ್ಪ ಗೌಡ ಎಂಬವರು ಸೆ. 8 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಮಾನಸಿಕವಾಗಿ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸೀತಾರಾಮ, ಚಿದಾನಂದ, ಗಣೇಶ, ಪುತ್ರಿ ಶ್ರೀಮತಿ ಮೀನಾಕ್ಷಿ ವಸಂತ ಬಾಂಜಿಕೋಡಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.